ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಕುರಿತು ಚರ್ಚೆಗಳು ನಡೆಯುತ್ತಲ್ಲೇ ಇದ್ದು, ಹಲವು ಶಾಸಕರು ದೆಹಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದಾರೆ. ಇದರ ನಡುವೆ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಕೂಡ ಸಚಿವ ಸ್ಥಾನದ ಆಸೆ ಬಿಚ್ಚಿಟ್ಟಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರ್, ಸಚಿವ ಸ್ಥಾನದ ಆಸೆ ಇರುವುದು ಸಹಜ. ನಾನು ಕೂಡ ಕೇಳಿದ್ದೇನೆ. ಪ್ರತಿಯೊಬ್ಬರಿಗೂ ಸಚಿವನಾಗಬೇಕು ಎಂಬುವುದು ಹಂಬಲ ಇರುತ್ತದೆ. ಹಾಗಾಗಿ ನಾನು ಕೂಡ ಕೇಳಿದ್ದೇನೆ. ಸಿಕ್ಕರೆ ಖುಷಿ, ಸಿಗದಿದ್ದರೂ ಖುಷಿಯೇ ಎಂದು ಹೇಳಿದರು.
ಮಗು ಕೇಳದೆ ತಾಯಿಯು ಕೈತುತ್ತು ತಿನಿಸುವುದಿಲ್ಲ. ಅದೇ ರೀತಿ ಸಚಿವ ಸ್ಥಾನ ಕೇಳುವುದು ಕರ್ತವ್ಯ. ಅದಕ್ಕಾಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದರು.



