May 20, 2026
Wednesday, May 20, 2026
spot_img

ವಿಜಯನಗರದಲ್ಲಿ ಭೀಕರ ಬಿರುಗಾಳಿಗೆ ಬಾಳೆ-ಪಪಾಯ ಬೆಳೆಗೆ ಹಾನಿ, ಸಂಕಷ್ಟದಲ್ಲಿ ರೈತ

ಹೊಸದಿಗಂತ ವರದಿ ವಿಜಯನಗರ:

ಜಿಲ್ಲೆಯ ಉಜ್ಜಯಿನಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ರಾತ್ರಿ‌ ಬೀಸಿದ ಬಿರುಗಾಳಿ ಸಹಿತ ಮಳೆಗೆ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಸರ್ಕಾರಿ ಶಾಲೆ ಮೇಲ್ಛಾವಣಿಯ ಶೀಟುಗಳು ಹಾರಿ ಹೋಗಿವೆ.

ಕೊಟ್ಟೂರು ತಾಲೂಕಿನ ಉಜ್ಜಯಿನಿ, ಮಂಗಾಪುರ, ನಿಂಬಳಗೇರೆ, ಯರಮ್ಮನಹಳ್ಳಿ ಭಾಗದಲ್ಲಿ ಕಳೆದ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಸುರಿದಿದೆ. ಭಾರೀ ಬಿರುಗಾಳಿಗೆ ಅಪಾರ ಪ್ರಮಾಣದ ಬಾಳೆ ಹಾಗೂ ಪಪ್ಪಾಯಿ ಗಿಡಗಳು ನೆಲಕ್ಕುರುಳಿದೆ. ಪರಿಣಾಣ ಕೈಗೆ ಬಂದಿದ್ದ ಬಾಳೆ ಹಾಗೂ ಪಪ್ಪಾಯಿ ಗಿಡಗಳು ಮುರಿದು ಬಿದ್ದಿದ್ದು, ರೈತರಿಗೆ ಭಾರಿ ನಷ್ಟ ಸಂಭವಿಸಿದೆ. ತಕ್ಷಣ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ನಿಂಬಳಗೆರೆ ಗ್ರಾಮದ ಸರ್ಕಾರಿ ಶಾಲೆ ಸೋರುತ್ತಿದ್ದ ಕಾರಣ ಮೇಲ್ಚಾವಣಿಗೆ ಅಳವಡಿಸಲಾಗಿದ್ದ ಕಬ್ಬಿಣದ ಶೀಟ್‌ಗಳ ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಶಾಲಾ ಆವರಣದಲ್ಲಿದ್ದ ಮರ ಧರೆಗುರುಳಿದ್ದರಿಂದ ಶಾಲೆಯ ಕಟ್ಟಡ ಜಖಂಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !