ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಜಲಮಂಡಳಿ ಭವಿಷ್ಯದ ನೀರು ನಿರ್ವಹಣೆಗೆ ತಂತ್ರಜ್ಞಾನವನ್ನು ಸೇರಿಸುವ ಮಹತ್ವದ ಹೆಜ್ಜೆ ಇಟ್ಟಿದೆ.
ಹವಾಮಾನ ಬದಲಾವಣೆ, ನಗರೀಕರಣ ಮತ್ತು ಅಂತರ್ಜಲ ಕುಸಿತದಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಉದ್ದೇಶದಿಂದ ಮೇ 27 ರಂದು ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜಿಸಲಾಗಿದೆ.
ಜಾಗತಿಕ ತಜ್ಞರ ಸಮಾಗಮ
ಈ ಶೃಂಗಸಭೆಯಲ್ಲಿ ದೇಶ-ವಿದೇಶದ ಜಲ ತಜ್ಞರು, AI ಪರಿಣತರು ಹಾಗೂ ತಂತ್ರಜ್ಞಾನ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಐ ಆಧಾರಿತ ಜಲ ಆಡಳಿತ, ಸ್ಮಾರ್ಟ್ ಯುಟಿಲಿಟಿ ಮತ್ತು ಡಿಜಿಟಲ್ ಟ್ವಿನ್ಸ್ ಕುರಿತು ಚರ್ಚೆಗಳು ನಡೆಯಲಿವೆ.
ಸ್ಮಾರ್ಟ್ ತಂತ್ರಜ್ಞಾನ ಪ್ರದರ್ಶನ
SCADA ವ್ಯವಸ್ಥೆ, GIS ಮ್ಯಾಪಿಂಗ್, IoT ಟ್ಯಾಂಕರ್ ಟ್ರ್ಯಾಕಿಂಗ್ ಮತ್ತು ಸ್ಮಾರ್ಟ್ ಮೀಟರಿಂಗ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಶೃಂಗಸಭೆಯಲ್ಲಿ ಪ್ರದರ್ಶಿಸಲಾಗುತ್ತದೆ.
ಇದನ್ನೂ ಓದಿ:
‘ಪಂಚಸೂತ್ರ’ ಕಾರ್ಯತಂತ್ರ ಆಕರ್ಷಣೆ
AI ಆಧಾರಿತ ‘ಪ್ರಜ್ಞಾ’, ಡೇಟಾ ಚಾಲಿತ ‘ನೀತಿ’, ತಂತ್ರಜ್ಞಾನ ‘ತಂತ್ರ’, ಹೂಡಿಕೆ ‘ಅರ್ಥ’ ಮತ್ತು ಹವಾಮಾನ ಭದ್ರತೆ ‘ಸ್ಥಿರತೆ’ ಒಳಗೊಂಡ ಪಂಚಸೂತ್ರ ಯೋಜನೆ ಮುಖ್ಯ ಆಕರ್ಷಣೆಯಾಗಲಿದೆ.
ಬೆಂಗಳೂರನ್ನು ಡಿಜಿಟಲ್ ವಾಟರ್ ಹಬ್ ಮಾಡುವ ಗುರಿ
ಪಾರದರ್ಶಕ, ದಕ್ಷ ಮತ್ತು ಸ್ಥಿತಿಸ್ಥಾಪಕ ಜಲ ವ್ಯವಸ್ಥೆ ನಿರ್ಮಿಸುವುದು ಮುಖ್ಯ ಉದ್ದೇಶವಾಗಿದೆ. 400ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳಲಿರುವ ಈ ಶೃಂಗಸಭೆಯನ್ನು ದೇಶದ ಅತಿದೊಡ್ಡ ಜಲ ತಂತ್ರಜ್ಞಾನ ವೇದಿಕೆ ಎಂದು ಪರಿಗಣಿಸಲಾಗಿದೆ.



