ಹೊಸದಿಗಂತ ವರದಿ ರಾಯಚೂರು :
ಭಾರತೀಯ ಜನತಾಪಕ್ಷ ರಾಜ್ಯ ಕಾಂಗ್ರೆಸ್ ಭ್ರಷ್ಟಾಚಾರ ಖಂಡಿಸಿ ಪಾದಯಾತ್ರೆ ಆರಂಭಿಸಿದೆ. ಪಾದಯಾತ್ರೆಯ ಮೂರನೇ ದಿನ ಇದಾಗಿದ್ದು, ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರ ಇಂದಿನ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.
ಗುಡದೂರು ಗ್ರಾಮದ ಕರಿಬಸವೇಶ್ವರ ದೇವಸ್ಥಾನದ ಎದುರು ಎತ್ತಿನ ಬಂಡೆಯಲ್ಲಿ ರಂಟೆಯನ್ನು ಹೆಗಲ ಮೇಲೆ ಹೊತ್ತು ಬಿ.ವೈ ವಿಜಯೇಂದ್ರ ಚಾಲನೆ ನೀಡಿದರು. ಶ್ರೀರಾಮುಲು ಅವರು ಎತ್ತಿನ ಬಂಡೆಯನ್ನು ಚಾಲನೆ ಮಾಡಿದರು.
ಈ ಸಂದರ್ಭದಲ್ಲಿ , ಪ್ರತಾಪಗೌಡ ಪಾಟೀಲ, ಶಿವರಾಜ ಪಾಟೀಲ, ಎಮ್.ನಾಗರಾಜ, ಸಿದ್ದರಾಜ ಕಲಕೋಟಿ ಸೇರಿದಂತೆ ಇತರರಿದ್ದರು.



