January17, 2026
Saturday, January 17, 2026
spot_img

Engineer’s Day | ರಾಷ್ಟ್ರದ ತಾಂತ್ರಿಕ ಪ್ರಗತಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಹಿರಿದು!

ದೇಶದ ಅಭಿವೃದ್ಧಿ ಕಾರ್ಯ, ತಾಂತ್ರಿಕ ಪ್ರಗತಿ ಮತ್ತು ಮೂಲಸೌಕರ್ಯದ ಸುಧಾರಣೆಯಲ್ಲಿ ಇಂಜಿನಿಯರ್‌ಗಳ ಕೊಡುಗೆ ಅಪಾರ. ಸೇತುವೆ, ರಸ್ತೆ, ಕಟ್ಟಡ, ಯಂತ್ರೋಪಕರಣಗಳು, ಅಣೆಕಟ್ಟುಗಳು ಸೇರಿದಂತೆ ನಮ್ಮ ಜೀವನ ಸುಗಮಗೊಳಿಸುವ ಅನೇಕ ಸೌಲಭ್ಯಗಳ ಹಿಂದಿರುವ ಶಕ್ತಿ ಇಂಜಿನಿಯರ್‌ಗಳು. ಈ ಕಾರಣಕ್ಕೇ ಅವರನ್ನು ಆಧುನಿಕ ಸಮಾಜದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಇಂತಹ ಶ್ರೇಷ್ಠ ಇಂಜಿನಿಯರ್‌ಗಳ ಪೈಕಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಮೊದಲಿಗರು. ಇವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಸೆಪ್ಟೆಂಬರ್‌ 15ರಂದು ಇಂಜಿನಿಯರ್‌ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ.

ಸೆಪ್ಟೆಂಬರ್‌ 15ರ ವಿಶೇಷತೆ
ಭಾರತ ರತ್ನ ಪುರಸ್ಕೃತ ಹಾಗೂ ಆಧುನಿಕ ಮೈಸೂರಿನ ಪಿತಾಮಹ ಎಂದೇ ಖ್ಯಾತರಾಗಿರುವ ಸರ್. ಎಂ. ವಿಶ್ವೇಶ್ವರಯ್ಯ ಅವರು ಜನಿಸಿದ ದಿನವೇ ಸೆಪ್ಟೆಂಬರ್‌ 15. ಮೈಸೂರು ರಾಜ್ಯದ ಅಭಿವೃದ್ಧಿಗೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅವರ ಅಮೂಲ್ಯ ಕೊಡುಗೆಯನ್ನು ಗೌರವಿಸುವ ಸಲುವಾಗಿ 1968ರಲ್ಲಿ ಭಾರತ ಸರ್ಕಾರವು ಈ ದಿನವನ್ನು ಅಧಿಕೃತವಾಗಿ ಇಂಜಿನಿಯರ್‌ ದಿನವೆಂದು ಘೋಷಿಸಿತು.

ಸರ್. ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ
ಸರ್. ವಿಶ್ವೇಶ್ವರಯ್ಯ ಅವರ ಸಾಧನೆಗಳ ಪೈಕಿ ಹೈದರಾಬಾದ್‌ನ ಪ್ರವಾಹ ನಿಯಂತ್ರಣ ವ್ಯವಸ್ಥೆ, ಕೃಷ್ಣರಾಜ ಸಾಗರ ಅಣೆಕಟ್ಟು, ಮೈಸೂರು ಸೋಪ್ ಫ್ಯಾಕ್ಟರಿ, ಉಕ್ಕಿನ ಕಾರ್ಖಾನೆ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳ ಸ್ಥಾಪನೆ ಪ್ರಮುಖವಾದವು. ತಂತ್ರಜ್ಞಾನವನ್ನು ಸಾಮಾನ್ಯ ಜನರ ಹಿತಕ್ಕಾಗಿ ಬಳಸುವಲ್ಲಿ ಅವರು ಆದರ್ಶ ವ್ಯಕ್ತಿತ್ವ ತೋರಿದರು. ಅವರ ಕಾರ್ಯಭಾರತನ ಮತ್ತು ದೃಷ್ಟಿಕೋನವೇ ಇಂದಿಗೂ ಇಂಜಿನಿಯರ್‌ಗಳಿಗೆ ಪ್ರೇರಣೆ.

1955ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿತು. ಅಷ್ಟೇ ಅಲ್ಲದೆ, ಅವರ ಕೊಡುಗೆಯನ್ನು ಸದಾ ಸ್ಮರಿಸಲು 1968ರಿಂದ ಪ್ರತಿ ವರ್ಷ ಇಂಜಿನಿಯರ್‌ ದಿನವನ್ನು ಆಚರಿಸಲಾಗುತ್ತಿದೆ. ಈ ದಿನವು ಕೇವಲ ಸರ್. ವಿಶ್ವೇಶ್ವರಯ್ಯ ಅವರನ್ನು ಸ್ಮರಿಸುವುದಷ್ಟೇ ಅಲ್ಲ, ತಂತ್ರಜ್ಞಾನ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಎಲ್ಲಾ ಇಂಜಿನಿಯರ್‌ಗಳ ಶ್ರಮವನ್ನು ಗುರುತಿಸುವ ಸಂದರ್ಭವಾಗಿದೆ.

ಯಾವುದೇ ಕ್ಷೇತ್ರವಾಗಿರಲಿ – ಮೂಲಸೌಕರ್ಯ, ಬಾಹ್ಯಾಕಾಶ ಸಂಶೋಧನೆ, ಪರಿಸರ ಅಥವಾ ಕೈಗಾರಿಕೆ – ಇಂಜಿನಿಯರ್‌ಗಳ ಕೊಡುಗೆ ಅಗತ್ಯ. ಅವರು ಕೇವಲ ಯಂತ್ರಗಳ ಸೃಷ್ಟಿಕರ್ತರು ಮಾತ್ರವಲ್ಲ, ರಾಷ್ಟ್ರದ ಪ್ರಗತಿಯ ಆಧಾರವೂ ಆಗಿದ್ದಾರೆ. ಇಂಜಿನಿಯರ್‌ ದಿನವು ಅವರ ಸಾಧನೆಗಳನ್ನು ನೆನಪಿಸಲು, ಗೌರವಿಸಲು ಹಾಗೂ ಮುಂದಿನ ತಲೆಮಾರಿನ ಇಂಜಿನಿಯರ್‌ಗಳನ್ನು ಪ್ರೇರೇಪಿಸಲು ಆಚರಿಸಲಾಗುತ್ತದೆ.

Must Read

error: Content is protected !!