ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ರವರು ಮಂಗಳೂರಿನಲ್ಲಿ ಅಧಿವೇಶನ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನ ರಂಗೋಲಿ ಕಲಾವಿದೆ ವೀಣಾ ಐತಾಳ್ ರವರು ಸಿಎಂ ರಂಗೋಲಿ ಕಲಾಕೃತಿಯನ್ನು ರಚನೆ ಮಾಡಿದ್ದಾರೆ.
ಈ ಕಲಾಕೃತಿಯ ಛಾಯಾಚಿತ್ರಕ್ಕೆ ಚೌಕಟ್ಟು ನಿರ್ಮಿಸಿ, ನಾಡಿದ್ದು ಇದನ್ನು ಮುಖ್ಯಮಂತ್ರಿಯವರಿಗೆ ಉಡುಗೊರೆಯಾಗಿ ನೀಡಲಿದ್ದಾರೆ.
ಇದರ ಜೊತೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯ ಮಂತ್ರಿಯ ಅಧಿವೇಶನ ಕಾರ್ಯಕ್ರಮದ ಸಮೀಪ 20 ಅಡಿ ಉದ್ದಗಲದ 2 ಬ್ರಹತ್ ರಂಗೋಲಿ ಕಲೆಯ ಕಲಾಕೃತಿಯನ್ನು ಮಾಡಲಿದ್ದಾರೆ. ತುಳುನಾಡಿನ ಸಾಂಸ್ಕೃತಿಕ ಪ್ರತೀಕಗಳಾದ ಯಕ್ಷಗಾನ ಮತ್ತು ಕಂಬಳದ ವಿನ್ಯಾಸವನ್ನು ಈ ಕಲಾಕೃತಿಗಳಲ್ಲಿ ಮಾಡಲಿದ್ದಾರೆ.
ವೀಣಾ ಐತಾಳರು ಈಗಾಗಲೇ ಹಲವಾರು ರಂಗೋಲಿ ಕಲಾಕೃತಿಗಳನ್ನು ಮಾಡಿದ್ದಾರೆ. ಇವರ ರಂಗೋಲಿಯ ವಿಶೇಷವೆಂದರೆ ಕಡು ಮತ್ತು ತಿಳಿ ಬಣ್ಣವನ್ನು ಮಿಶ್ರ ಮಾಡಿ, ಆ ರಂಗೋಲಿಗೆ ಸಹಜ ಭಾವ, ನೈಜ ಜೀವ ನೀಡುವ ಪ್ರಬುದ್ಧತೆಯನ್ನು ಹೊಂದಿರುತ್ತಾರೆ. 18ರಂದು ನಡೆಯುವ ಕಾರ್ಯಕ್ರಮಕ್ಕೆ ಇಂದಿನಿಂದಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಂಗೋಲಿ ಕಲಾಕೃತಿ ಮಾಡಲು ಆರಂಭಿಸಿದ್ದಾರೆ.



