ಬೆಂಗಳೂರಿನಲ್ಲಿ ಮೀನುಗಾರರ ಬಲೆಗೆ ಸಿಲುಕಿ ಕಾರ್ಮೊರೆಂಟ್ ಪಕ್ಷಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಮೀನುಗಾರರ ಬಲೆಗೆ ಸಿಲುಕಿ ಕಾರ್ಮೊರೆಂಟ್ ಪಕ್ಷಿ ಮೃತಪಟ್ಟಿದೆ. ಬೆಂಗಳೂರಿನ ಪುಟ್ಟೇನಹಳ್ಳಿಯ ಕೆರೆಯಲ್ಲಿ ಪಕ್ಷಿ ಮೃತಪಟ್ಟಿದೆ. ಮೀನುಗಾರರ ಬಲೆಯಲ್ಲಿ ಪಕ್ಷಿ ಸಿಕ್ಕಿಹಾಕಿಕೊಂಡಿದ್ದು ಅಲುಗಾಡಲಾಗದೇ ಪಕ್ಷಿ ಒದ್ದಾಡಿದೆ.

ಸ್ಥಳೀಯ ನಿವಾಸಿ ಕೆ. ಶ್ರೀನಿವಾಸ್ ಕೆರೆಯ ಸುತ್ತಮುತ್ತಲಿನ ಫೋಟೊಗಳನ್ನು ತೆಗೆಯುವ ವೇಳೆ ಕಾರ್ಮೊರೆಂಟ್ ಒದ್ದಾಡುತ್ತಿರುವ ದೃಶ್ಯ ಕಣ್ಣಿಗೆ ಬಿದ್ದಿದೆ. ಅವರು ತಮ್ಮ ಬ್ಲಾಗ್‌ನಲ್ಲಿ ಫೋಟೊಗಳನ್ನು ಶೇರ್ ಮಾಡಿದ ನಂತರ ವಿಷಯ ಬೆಳಕಿಗೆ ಬಂದಿದೆ.

ಸಾಕಷ್ಟು ಸ್ಥಳೀಯರು ನಿಂತು ಈ ದೃಶ್ಯವನ್ನು ನೋಡಿದ್ದು, ಶ್ರೀನಿವಾಸ್ ಏವಿಯನ್ ಮತ್ತು ಸರೀಸೃಪ ಪುನರ್ವಸತಿ ಕೇಂದ್ರಕ್ಕೆ ಕರೆ ಮಾಡಿದ್ದಾರೆ. ಅವರು ಸ್ಥಳಕ್ಕೆ ಧಾಬಿಸುವುದರೊಳಗೆ ಪಕ್ಷಿ ಪ್ರಾಣ ಬಿಟ್ಟಿದೆ.

ಹಸಿವು ಹಾಗೂ ಬಳಲಿಕೆಯಿಂದ ಪಕ್ಷಿ ಮೃತಪಟ್ಟಿದೆ ಎನ್ನಲಾಗಿದೆ. ಈ ರೀತಿ ಘಟನೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಸಾಕಷ್ಟು ಪಕ್ಷಿಗಳು ಮೃತಪಟ್ಟಿವೆ. ಇನ್ನು ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!