ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರ ಜಿಲ್ಲೆಯ ಕೆಂದಟ್ಟಿ ಕೆರೆಯಲ್ಲಿ ತನ್ನ ಎರಡು ವರ್ಷದ ಮಗಳನ್ನು ಮುಳುಗಿಸಿ ವ್ಯಕ್ತಿಯೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆರೆಯ ಬಳಿ ಕಾರು ನಿಂತಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವನ್ನು ಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡ ರಾಹುಲ್ ಕೆಲ ದಿನದ ಹಿಂದೆ ತಮ್ಮ ಮನೆಯಲ್ಲಿ ಚಿನ್ನಾಭರಣ ಕಳುವಾಗಿದೆ ಎಂದು ಪೊಲೀಸರ ಬಳಿ ದೂರು ನೀಡಿದ್ದಾರೆ. ಈ ಬಗ್ಗೆ ಪದೇ ಪದೆ ಠಾಣೆಗೆ ಹೋಗಿ ವಿಚಾರಿಸುತ್ತಿದ್ದರು.
ಆದರೆ ಚಿನ್ನಾಭರಣ ಕಳುವು ಆಗಿರಲಿಲ್ಲ. ರಾಹುಲ್ ಖುದ್ದು, ಚಿನ್ನ ಕದ್ದು ಅಡವಿಟ್ಟಿದ್ದರು. ಸುಳ್ಳು ಹೇಳಿ ದೂರು ನೀಡಿದ್ದರಿಂದ ಪೊಲೀಸರು ಮನೆ ಬಳಿ ಬಂದು ವಿಚಾರಿಸಿದ್ದರು. ಠಾಣೆಗೆ ಬರುವಂತೆ ಹೇಳಿದ್ದರು. ಇದೇ ಭಯಕ್ಕೆ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.