Wednesday, December 10, 2025

ಎರಡು ವರ್ಷದ ಬಳಿಕ ಭಾರತಕ್ಕೆ ಶುಭಾರಂಭ: ವಿಶಾಖಪಟ್ಟಣದಲ್ಲಿ ಟಾಸ್ ಗೆದ್ದ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಇದೊಂದು ವಿಚಿತ್ರ ಮತ್ತು ಖುಷಿಯ ಸುದ್ದಿ. ಬರೋಬ್ಬರಿ 20 ಏಕದಿನ ಪಂದ್ಯಗಳ ಸುದೀರ್ಘ ಕಾಯುವಿಕೆಯ ನಂತರ, ಟೀಮ್ ಇಂಡಿಯಾ ಅಂತಿಮವಾಗಿ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ!

ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ, ಭಾರತದ ನಾಯಕ ಕೆಎಲ್ ರಾಹುಲ್ ನಾಣ್ಯವನ್ನು ತಮ್ಮತ್ತ ತಿರುಗಿಸಿಕೊಂಡು, ತಂಡದ 2 ವರ್ಷಗಳ ಟಾಸ್ ಸೋಲಿನ ಸರಣಿಗೆ ಅಂತ್ಯ ಹಾಡಿದ್ದಾರೆ. ಇದು ತಂಡಕ್ಕೆ 21ನೇ ಪಂದ್ಯದ ಗೆಲುವಾಗಿದೆ.

ಈ ಗೆಲುವಿನ ಹಿಂದಿನ ಕಥೆ ಸ್ವಾರಸ್ಯಕರವಾಗಿದೆ. ಟೀಮ್ ಇಂಡಿಯಾ ಕೊನೆಯದಾಗಿ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿದ್ದು ನವೆಂಬರ್ 15, 2023 ರಂದು. ಅದು 2023ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ. ಅಂದು ನ್ಯೂಜಿಲೆಂಡ್ ವಿರುದ್ಧ ರೋಹಿತ್ ಶರ್ಮಾ ಟಾಸ್ ಗೆದ್ದಿದ್ದರು. ಅದರ ನಂತರ ಆಡಿದ ಸತತ 20 ಏಕದಿನ ಪಂದ್ಯಗಳಲ್ಲಿ ಭಾರತ ತಂಡಕ್ಕೆ ಟಾಸ್ ಅದೃಷ್ಟ ಒಲಿದಿರಲಿಲ್ಲ.

ಟಾಸ್ ಗೆದ್ದಿರುವ ನಾಯಕ ಕೆಎಲ್ ರಾಹುಲ್ ಅವರು ಯಾವುದೇ ಯೋಚನೆಯಿಲ್ಲದೆ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.

ಈ ನಿರ್ಣಾಯಕ ಪಂದ್ಯಕ್ಕಾಗಿ ಕಣಕ್ಕಿಳಿಯಲಿರುವ ತಂಡಗಳು ಇಂತಿವೆ:

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಕೆಎಲ್ ರಾಹುಲ್ (ನಾಯಕ), ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.

ದಕ್ಷಿಣ ಆಫ್ರಿಕಾ ಪ್ಲೇಯಿಂಗ್ XI: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಯಾನ್ ರಿಕೆಲ್ಟನ್, ಐಡೆನ್ ಮಾರ್ಕ್ರಾಮ್, ಮ್ಯಾಥ್ಯೂ ಬ್ರೀಟ್ಝ್​​ಕೆ, ಡೆವಾಲ್ಡ್ ಬ್ರೆವಿಸ್, ಮಾರ್ಕೊ ಯಾನ್ಸೆನ್, ಕಾರ್ಬಿನ್ ಬಾಷ್, ಲುಂಗಿ ಎನ್​ಗಿಡಿ, ಕೇಶವ್ ಮಹಾರಾಜ್, ಒಟ್ನೀಲ್ ಬಾರ್ಟ್‌ಮ್ಯಾನ್.

error: Content is protected !!