SHOCKING| ನೇಪಾಳದ ಹಿಂದು ದೇವಾಲಯದಲ್ಲಿ ಭಾರೀ ಪ್ರಮಾಣದ ಚಿನ್ನಾಭರಣ ಕಳವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೇಪಾಳದ ಹಿಂದು ದೇವಾಲಯದಿಂದ ಅಪಾರ ಪ್ರಮಾಣದ ಚಿನ್ನ ನಾಪತ್ತೆಯಾಗಿದೆ. ಪಶುಪತಿನಾಥ ದೇಗುಲದಲ್ಲಿ 10 ಕೆಜಿ ಚಿನ್ನ ಕಳುವಾಗಿದ್ದು, ಕ್ಷೇತ್ರಕ್ಕಾಗಮಿಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದೇವಸ್ಥಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ತಪಾಸಣೆ ನಡೆಸಿದ್ದಾರೆ.

ಈ ಕ್ರಮದಲ್ಲಿ ಭಾನುವಾರ ಕೆಲವು ಗಂಟೆಗಳ ಕಾಲ ದೇವಸ್ಥಾನದಲ್ಲಿ ದರ್ಶನವನ್ನು ನಿಲ್ಲಿಸಲಾಗಿತ್ತು. ಇದೇ ವೇಳೆ ದೇವಸ್ಥಾನದಲ್ಲಿಯೇ ಕಳ್ಳತನ ನಡೆದಿರುವುದು ಅಚ್ಚರಿ ಮೂಡಿಸಿದೆ. ಕಳೆದ ವರ್ಷ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಶಿವಲಿಂಗವನ್ನು 103 ಕೆಜಿ ಚಿನ್ನದಿಂದ ತಯಾರಾದ ಜಲಹರಿ ಎಂಬ ಆಭರಣದಿಂದ ಅಲಂಕರಿಸಲಾಗಿತ್ತು.

ಜಲಹರಿಯ ಗುಣಮಟ್ಟ ಹಾಗೂ ತೂಕದ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಭ್ರಷ್ಟಾಚಾರ ನಿಗ್ರಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!