ಹೊಸದಿಗಂತ ವರದಿ ಹೊನ್ನಾವರ:
ಪಟ್ಟಣದ ರಾಮತೀರ್ಥ ಸಮೀಪ ಚಾಲಕನ ನಿಯಂತ್ರ ತಪ್ಪಿ ಸರಕು ತುಂಬಿದ ಲಾರಿ ಚರಡಿಗೆ ನುಗ್ಗಿದ ಘಟನೆ ನಡೆದಿದೆ.
ಕುಮಟಾದಿಂದ ಹೊನ್ನಾವರ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನ ಅಪಘಾತಕ್ಕಿಡಾಗಿದೆ. ಲಾರಿಯಲ್ಲಿ ಸಿಮೇಂಟ್ ಸಾಗಾಟ ಮಾಡಲಾಗುತ್ತಿತ್ತು. ರಾಮತೀರ್ಥ ಸಮೀಪ ಬರುತ್ತಿದ್ದಂತೆ ವಾಹನದ ಸ್ಟೆರಿಂಗ್ ಲಾಕ್ ಆಗಿದ್ದು,ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ.
ರಸ್ತೆ ಪಕ್ಕದ ಚರಂಡಿಗೆ ಇಳಿದಿದ್ದು,ಅದ್ರಷ್ಟವಷಾತ್ ಮನೆಗೆ ನುಗ್ಗುವುದು ತಪ್ಪಿದಂತಾಗಿದೆ. ಕ್ರೆನ್ ಮೂಲಕ ಲಾರಿ ಮೇಲೆತ್ತಲಾಯಿತು. ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು,ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.