ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕಣ್ಣೂರಿನಲ್ಲಿ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಬಾಲಕ ಸೇರಿ ಐವರು ಮೃತಪಟ್ಟಿದ್ದಾರೆ.
ರುಕುನ್ ಪುನ್ನಚೇರಿಯಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಮೃತರನ್ನು ಪದ್ಮಕುಮಾರ್ (59), ಪುತ್ತೂರು ಕರಿವೆಳ್ಳೂರು ನಿವಾಸಿ ಕೃಷ್ಣನ್ (65), ಮಗಳು ಅಜಿತಾ (35), ಚೂರಿಕಾಟ್ ಕಮ್ದಮೇಟ್ನ ಪತಿ ಸುಧಾಕರನ್ (49), ಅಜಿತಾ ಅವರ ಸಹೋದರನ ಮಗ ಆಕಾಶ್(9) ಎಂದು ಗುರುತಿಸಲಾಗಿದೆ.
ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಮೃತಪಟ್ಟ ಐವರು ಕಾರು ಪ್ರಯಾಣಿಕರು. ಸ್ಥಳದಲ್ಲೇ ಐವರು ಮೃತಪಟ್ಟಿದ್ದು, ಮೃತರು ಕಾಸರಗೋಡು ನಿವಾಸಿಗಳು ಎನ್ನಲಾಗಿದೆ. ಕಾರಿನ ಗಾಜನ್ನು ಒಡೆದು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕಾರಿನ ಮುಂಭಾಗ ಲಾರಿಯ ಕೆಳಗೆ ಇತ್ತು. ಭೀಕರ ಅಪಘಾತ ನೋಡಿದ ಜನ ಬೆಚ್ಚಿಬಿದ್ದಿದ್ದಾರೆ.