ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಭೀಕರವಾಗಿ ಮೃತಪಟ್ಟಿದ್ದಾರೆ.
ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಲಾರಿ ಚಾಲಕನ ನಿರ್ಲಕ್ಷ್ಯವನ್ನು ತೋರಿಸಿದೆ. ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ. ಘಟನೆಯಲ್ಲಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಾರಿ ಹಾಗೂ ಕಾರು ಬೇರೆ ಬೇರೆ ಲೇನ್ನಲ್ಲಿ ಚಲಿಸುತ್ತಿತ್ತು ಕಾರು ಲಾರಿ ಸಮಕ್ಕೆ ಬರುವ ಸಂದರ್ಭದಲ್ಲಿ ಏಕಾ ಏಕಿ ಲಾರಿ ಎಡಕ್ಕೆ ತಿರುಗಿ ಯೂಟರ್ನ್ ತೆಗೆದುಕೊಳ್ಳಲು ಮುಂದಾಗಿದೆ. ಆಗ ಕಾರಿನ ಮೇಲೆ ಟ್ರಕ್ ಹರಿದಿದ್ದು ಒಂದೇ ಕುಟುಂಬದ 6 ಮಂದಿ ಜೀವ ಕಳೆದುಕೊಂಡಿದ್ದಾರೆ.
मुख्यमंत्री जी इन बजरी माफिया से डरने की जगह इन पर कार्यवाही कीजिए
तीन दिन से @RajCMO पुलिस आपका निर्देश नही मान रही हैं। @PoliceRajasthan अभी तक ट्रक चालक को नही पकड़ सकी पूरा परिवार सदमे में हैं अगर परिवार के किसी अन्य सदस्य को आघात से नुकसान आपकी जिमेदारी होगी @BhajanlalBjp pic.twitter.com/3GIjqpbC7t— Dinesh Dadiya (@DineshDadiya) May 7, 2024