ಹೊಸದಿಗಂತ ವರದಿ ವಿಜಯಪುರ:
ಜಮೀನಿನಲ್ಲಿ ಹುಲ್ಲು ಕುಯ್ಯುವಾಗ ಹಾವು ಕಚ್ಚಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬೇನಕೊಟಗಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ನಿಂಗನಗೌಡ ಬಿರಾದಾರ (53) ಮೃತಪಟ್ಟ ವ್ಯಕ್ತಿ. ನಿಂಗನಗೌಡ ಬಿರಾದಾರ ಈತನು ಜಮೀನಿನಲ್ಲಿರುವ ಹುಲ್ಲು ಕತ್ತರಿಸಿ, ಚೆಲ್ಲುತ್ತಿದ್ದ ವೇಳೆ ಹಾವು ಕಚ್ಚಿ ಅಸುನೀಗಿದ್ದಾನೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ