ಹೊಸದಿಗಂತ ವರದಿ,ಅಂಕೋಲಾ:
ಹೊಟ್ಟೆ ನೋವು ಮತ್ತು ಎದೆ ನೋವು ತಾಳಲಾರದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಘಟನೆ ನಡೆದಿದೆ.
ಅವರ್ಸಾ ಸಕಲಬೇಣ ನಿವಾಸಿ ದತ್ತಾ ತಿಮ್ಮಾ ನಾಯ್ಕ (52) ಮೃತ ವ್ಯಕ್ತಿಯಾಗಿದ್ದು ಕೂಲಿ ಕೆಲಸ ಮಾಡುತ್ತಿದ್ದ ಈತ ವಿಪರೀತವಾಗಿ ಸರಾಯಿ ಕುಡಿದು ಅನಾರೋಗ್ಯಕ್ಕೆ ಈಡಾಗಿದ್ದ ಎನ್ನಲಾಗಿದೆ.
ಜನೆವರಿ 8 ರಂದು ಶನಿವಾರ ಮನೆಯಿಂದ ಹೊರಗೆ ಹೋಗಿ ವಿಷ ಸೇವಿಸಿಕೊಂಡು ಬಂದು ವಾಂತಿ ಮಾಡುತ್ತಿದ್ದ ಈತನನ್ನು ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಉಪಚಾರ ಫಲಕಾರಿಯಾಗದ ಕಾರಣ ರವಿವಾರ ಬೆಳಿಗ್ಗೆ ವ್ಯಕ್ತಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.