ನೇಣು ಬಿಗಿದ ಸ್ಧಿತಿಯಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ

ಹೊಸದಿಗಂತ ವರದಿ, ಕುಶಾಲನಗರ: 

ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತನನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಪ್ರವೀಣ್(35) ಎಂದು ಗುರುತಿಸಲಾಗಿದೆ.
ಹಾರಂಗಿ ಹಿನ್ನೀರಿನಲ್ಲಿ ಖಾಸಗಿಯವರು ‘ವಾಟರ್ ಅಡ್ವೆಂಚರ್‌’ ನಡೆಸುವ ಸಲುವಾಗಿ ರ್‍ಯಾಫ್ಟ್ ನಿರ್ವಹಣೆಗೆಂದು ಪ್ರವೀಣ್ ನಿಯೋಜನೆಗೊಂಡಿದ್ದನೆನ್ನಲಾಗಿದೆ.
ಚಿಕ್ಕತ್ತೂರಿನ ಲಿಖಿತಾ ಎಂಬವರ ಮನೆಯಲ್ಲಿ ಈತ ಒಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಹಿಂದಿನ ರಾತ್ರಿ ಕೆಲವರು ಈತನ‌ ನಿವಾಸಕ್ಕೆ ಬಂದು ಹೋಗಿರುವ ಕುರುಹುಗಳು ಕಂಡುಬಂದಿದೆ. ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!