ಏ. 28 ರಂದು ಬಾಗಲಕೋಟೆಗೆ ಮೋದಿ : ಶಾಂತಗೌಡ ಪಾಟೀಲ

ದಿಗಂತ ವರದಿ ಬಾಗಲಕೋಟೆ :

ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹಾಗೂ ವಿಜಯಪುರ ಅಭ್ಯರ್ಥಿ ರಮೇಶ ಜಿಗಜಿನ್ನಿ ಪರವಾಗಿ ಪ್ತಚಾತ ನಡೆಸಲು ಪ್ತಧಾನಿ ನರೇಂದ್ರ ‌ಮೋದಿ‌ಅವರು ಏ.28 ರಂದು ಬಾಗಲಕೋಟೆ ಗೆ ಆಗಮಿಸಲಿದ್ದಾರೆ ಎಂದರು.

ನವನಗರದಲ್ಲಿ‌ ನಡೆಯುವ ಮೋದಿ ಕಾರ್ಯಕ್ರಮದ ಸಿದ್ದತೆಗೆ ವೇದಿಕೆ ನಿರ್ಮಾಣ ಕುರಿತು‌ ವಿವರ ನೀಡಿದ ಅವರು ಮೋದಿಯವರ ಕಾರ್ಯಕ್ರಮಕ್ಕೆ 2 ಲಕ್ಷ ಜನ ಸೇರಲಿದ್ದಾರೆ.ವಿಜಯಪುರ , ಬಾಗಲಕೋಟೆ ಜಿಲ್ಲೆಯಿಂದ‌ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಲಿದ್ದಾರೆ ಎಂದು ಹೇಳಿದರು.

ನವನಗರದ ತೋಟಗಾರಿಕೆ ವಿವಿ ಸಮೀಪದ ನೂರು ಎಕರೆ ಜಾಗದಲ್ಲಿ ಸಮಾವೇಶ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಮೋದಿ ಅವರು ಸಮಾವೇಶ‌ಉದ್ದೇಶಿಸಿ ಮಾತನಾಡುವರು ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!