ಬಡತನದ ಬೇಗೆ ತಾಳದೆ ಹೆತ್ತ ಮಗುವನ್ನು ಮಾರಾಟ ಮಾಡಿದ ತಾಯಿ!

ಹೊಸದಿಗಂತ ವರದಿ, ಮೈಸೂರು:

ಬಡತನದಿಂದ ಬಳಲುತ್ತಿದ್ದ ತಾಯಿಯೊಬ್ಬ ಆಗ ತಾನೆ ಜನ್ಮ ಕೊಟ್ಟ ತನ್ನ ಮಗುವನ್ನು ಮಾರಾಟ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ವಿಶ್ವನಾಥ ಕಾಲೋನಿಯಲ್ಲಿ ನಡೆದಿದೆ.
ಚೌಡಮ್ಮ ಎಂಬಾಕೆಯೇ ಮಗು ಮಾರಾಟ ಮಾಡಿದವಳು.
ಈಗಾಗಲೇ ನಾಲ್ಕು ಮಗು ಇದ್ದ ಚೌಡಮ್ಮಳಿಗೆ ಐದನೆ ಮಗು ಜನಿಸಿತ್ತು. ಆಸ್ಪತ್ರೆಯ ಸಿಸಿಟಿವಿಯಲ್ಲಿ ತಮ್ಮ ಕೃತ್ಯ ಬಯಲಾಗುತ್ತದೆ ಎಂದು ಲೆಕ್ಕಾಚಾರ ಹಾಕಿದ ಆಕೆ ಬಸ್ ನಿಲ್ದಾಣದಲ್ಲಿ ಮಕ್ಕಳಿಲ್ಲದೆ ಯಾತನೆ ಪಡುತ್ತಿದ್ದ ನಂಜನಗೂಡು ತಾಲೂಕಿನ ಹುರ ಗ್ರಾಮದ ದಂಪತಿಗೆ ಪೂರ್ಣಿಮಾ ಎಂಬಾಕೆಯ ಮೂಲಕ ಮಗು ಮಾರಾಟ ಮಾಡಿದ್ದಾಳೆ.
ಪ್ರಕರಣ ನಡೆದ ಮೂರು ದಿನಗಳ ಬಳಿಕ ಎಚ್.ಬಿ.ಬಸವರಾಜು ಎಂಬುವರ ಮೂಲಕ ಮಗು ಮಾರಾಟ ಪ್ರಕರಣ ಬಯಲಿಗೆ ಬಂದಿದೆ. ಸ್ಥಳೀಯರ ನೆರವಿನಿಂದ ಮಾರಾಟವಾಗಿದ್ದ ಮಗು ಮತ್ತೆ ತನ್ನ ತಾಯಿಯ ಮಡಿಲು ಸೇರಿದೆ.
ಈ ಸಂಬoಧ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!