ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಕನಸಿನಲ್ಲಿ ಶ್ರೀರಾಮ ಬಂದಿದ್ದ, ರಾಮಮಂದಿರಕ್ಕಾಗಿ ಹೋರಾಟ ಮಾಡಿದ್ದೀಯ, ಪ್ರಾಣಪ್ರತಿಷ್ಠಾಪನೆಗೆ ಏಕೆ ಬರುತ್ತಿಲ್ಲ ಎಂದು ಶ್ರೀರಾಮ ಪ್ರಶ್ನಿಸಿದ…
700 ಕಿಮೀ ಪಾದಯಾತ್ರೆ ಹೊರಟಿರುವ ಮುಸ್ಲಿಂ ಮಹಿಳೆ ಮಾತಿದು! ಹೌದು, ಮಾನವ ಹಕ್ಕುಗಳ ಹೋರಾಟಗಾರ್ತಿಯಾದ ಶಬ್ನಮ್ ಖಾನ್ ಶ್ರೀರಾಮನ ಮಾತಿನಂತೆ ಪಾದಯಾತ್ರೆ ನಡೆಸುತ್ತಿದ್ದಾರೆ.
ಮುಸ್ಲಿಂ ಆಗಿದ್ದರೂ ಹೃದಯದಲ್ಲಿ ಶ್ರೀರಾಮನ ಭಕ್ತಿ ತುಂಬಿರುವ ಶಬ್ನಮ್ ಅಯೋಧ್ಯೆಯ ಶ್ರೀರಾಮಮಂದಿರದ ಪ್ರಾಣಪ್ರತಿಷ್ಠೆಗಾಗಿ ಉತ್ಸುಕರಾಗಿದ್ದಾರೆ. ಸುದೀರ್ಘ ಯಾತ್ರೆ ಇದೆ, ದಾರಿಯಲ್ಲಿ ಸಾಕಷ್ಟು ಕಷ್ಟ ಕಾಣಲಿದೆ, ಎಲ್ಲವನ್ನೂ ಎದುರಿಸುತ್ತೇನೆ, ಮುಂದೆ ಸಾಗುತ್ತೇನೆ ಏಕೆಂದರೆ ರಾಮ ಜೊತೆಗಿದ್ದಾನೆ ಎಂದು ಶಬ್ನಮ್ ಹೇಳಿದ್ದಾರೆ.
ಜ.3ರಂದು ದೆಹಲಿಯ ಮಯೂರ್ ವಿಹಾರ್ನಿಂದ ಪ್ರಯಾಣ ಆರಂಭಿಸಿರುವ ಶಬ್ನಮ್ ಇದೀಗ ಉತ್ತರಪ್ರದೇಶದ ಹರ್ದೋಯಿ ತಲುಪಿದ್ದಾರೆ. ಶಬ್ನಮ್ರಂತೆಯೇ ಸಾಕಷ್ಟು ರಾಮಭಕ್ತರು ರಾಮನ ದರುಶನಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ.