ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ರೋಗಿಯೊಬ್ಬ ಮೃತಪಟ್ಟಿದ್ದಾನೆ.
ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಮೃತಪಟ್ಟಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ೩೭ ವರ್ಷದ ನಾಗರಾಜ್ ಉಸಿರಾಟದ ತೊಂದರೆಯಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಾರ್ಡ್ನಿಂದ ಸ್ಕ್ಯಾನಿಂಗ್ಗೆ ಹೋಗುವ ವೇಳೆ ನಾಗರಾಜ್ ಆರೋಗ್ಯ ಹದಗೆಟ್ಟಿದೆ. ಉಸಿರಾಟಕ್ಕೆ ತೊಂದರೆಯಾಗಿದೆ. ಆಕ್ಸಿಜನ್ ಅಗತ್ಯ ಇದ್ದರೂ ನೀಡಿಲ್ಲ. ಆತನ ಆರೋಗ್ಯ ಸಂಪೂರ್ಣ ಹದಗೆಟ್ಟ ನಂತರ ವಾರ್ಡ್ಗೆ ಕರೆದುಕೊಂಡು ಹೋಗಿ ಆಕ್ಸಿಜನ್ ನೀಡಿದ್ದಾರೆ.
ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದ ಕಾರಣ ರೋಗಿ ಮೃತಪಟ್ಟಿದ್ದಾರೆ ಎಂದು ಕುಟುಂದವರು ದೂರಿದ್ದಾರೆ.
ಮದುವೆಯಾಗಿ ಎರಡೇ ವರ್ಷವಾಗಿದ್ದ ನಾಗರಾಜ್ ಕೆಮ್ಮು ಕಫ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಉಸಿರಾಟದ ತೊಂದರೆ ಇರುವ ರೋಗಿ ಎಂದು ಗೊತ್ತಿದ್ದರೂ ಆಕ್ಸಿಜನ್ ಇಲ್ಲದೆ ಸ್ಕ್ಯಾನಿಂಗ್ಗೆ ಕರೆದುಕೊಂಡು ಹೋಗಿದ್ದಾರೆ. ಉಸಿರಾಡಲಾಗದೆ ರೋಗಿ ಒದ್ದಾಡಿದ ನಂತರ ಆತನನ್ನು ವಾರ್ಡ್ಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.