July 16, 2026
Thursday, July 16, 2026
spot_img

ಪುರಿ ರಥಯಾತ್ರೆಯಲ್ಲಿ ಜನ ಸಾಗರ; ಲಕ್ಷಾಂತರ ಭಕ್ತರ ನಡುವೆ ನೂಕುನುಗ್ಗಲು, ಓರ್ವ ಸಾ*ವು, ಹಲವರಿಗೆ ಗಾಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಒಡಿಶಾದ ಪುರಿಯಲ್ಲಿ ಗುರುವಾರ ನಡೆದ ಶತಮಾನಗಳ ಇತಿಹಾಸವಿರುವ ಜಗನ್ನಾಥ ರಥಯಾತ್ರೆಯ ವೇಳೆ ನೂಕುನುಗ್ಗಲು ಉಂಟಾಗಿದ್ದು, ಒಬ್ಬ ಭಕ್ತ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ರಥೋತ್ಸವದ ಧಾರ್ಮಿಕ ವಿಧಿವಿಧಾನಗಳ ಸಂದರ್ಭದಲ್ಲಿ ಏಕಾಏಕಿ ತಳ್ಳಾಟ ನಡೆದು ಏಳು ಜನ ಭಕ್ತರು ತೀವ್ರ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ 60 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.

 ಭಾರಿ ಮಳೆ ನಡುವೆಯೂ ಹರಿದುಬಂದ ಭಕ್ತ ಸಾಗರ

ಪುರಿ ನಗರದಲ್ಲಿ ಮಂಗಳವಾರದಿಂದ ಇಂದಿನವರೆಗೆ ಬರೋಬ್ಬರಿ 233 ಮಿ.ಮೀ ಭಾರಿ ಮಳೆ ದಾಖಲಾಗಿದೆ. ಇಂದೂ ಕೂಡ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದರೂ ಭಕ್ತರ ಉತ್ಸಾಹ ಕುಂದಿರಲಿಲ್ಲ. ಗ್ರಾಂಡ್ ರೋಡ್‌ನಲ್ಲಿ ಸಾವಿರಾರು ಭಕ್ತರು ಸಾಂಪ್ರದಾಯಿಕ ನೃತ್ಯ ಮಾಡುತ್ತಾ ಸೋದರರಾದ ಜಗನ್ನಾಥ, ಬಲಭದ್ರ ಹಾಗೂ ಸುಭದ್ರಾ ದೇವಿಯ ರಥೋತ್ಸವವನ್ನು ಸಂಭ್ರಮಿಸಿದರು. ವರ್ಷಕ್ಕೊಮ್ಮೆ ಮಾತ್ರ ಈ ಮೂವರು ದೇವತೆಗಳನ್ನು 12ನೇ ಶತಮಾನದ ಈ ಪವಿತ್ರ ಮಂದಿರದಿಂದ ಹೊರಗೆ ತರಲಾಗುತ್ತದೆ.

ವಾಟರ್‌ಲಾಗಿಂಗ್ ಸವಾಲು; ಹೈ ಅಲರ್ಟ್ ಘೋಷಿಸಿದ್ದ ಸಿಎಂ

ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಇಂದು ಬೆಳಿಗ್ಗೆಯಷ್ಟೇ ರಥಯಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಿ, ಭಕ್ತರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದ್ದರು. ನಗರದಲ್ಲಿ ಮಳೆ ನೀರು ನಿಲ್ಲುವುದು ದೊಡ್ಡ ಸವಾಲಾಗಿ ಪರಿಣಮಿಸಿದ್ದರಿಂದ, ಪುರಿ ಜಿಲ್ಲಾಡಳಿತ, ಮುನ್ಸಿಪಲ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳು ಹೈ ಅಲರ್ಟ್ ಆಗಿದ್ದುಕೊಂಡು ತಕ್ಷಣ ನೀರು ತೆರವುಗೊಳಿಸುವಂತೆ ಸಿಎಂ ಕಟ್ಟುನಿಟ್ಟಿನ ಆದೇಶ ನೀಡಿದ್ದರು.

ಇದನ್ನೂ ಓದಿ:

13,000 ಪೊಲೀಸರು, AI ತಂತ್ರಜ್ಞಾನದ ಹೈಟೆಕ್ ಕಣ್ಗಾವಲು

ಭದ್ರತೆಗಾಗಿ 19 ಐಪಿಎಸ್ ಅಧಿಕಾರಿಗಳು, ಸುಮಾರು 13,000 ಪೊಲೀಸ್ ಸಿಬ್ಬಂದಿ ಹಾಗೂ ಸಿಆರ್‌ಪಿಎಫ್, ಬಿಎಸ್‌ಎಫ್, ಆರ್‌ಎಎಫ್ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 15 ಕಂಪನಿಗಳನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು. ಇಡೀ ಗ್ರಾಂಡ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಕಣ್ಣಿಡಲು ಡ್ರೋನ್-ಜ್ಯಾಮಿಂಗ್ ವ್ಯವಸ್ಥೆ ಹೊಂದಿರುವ ಒಟ್ಟು 473 ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇವುಗಳನ್ನು ಎರಡು ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗಳ ಮೂಲಕ ಲೈವ್ ಆಗಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !