ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಚ್ಛ ಭಾರತ ಅಭಿಯಾನ ಆರಂಭವಾಗಿ 10 ವರ್ಷಗಳಾಗಿವೆ. ಮಹಾತ್ಮ ಗಾಂಧಿಜಿಯವರ 150ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತವು ಮಹಾತ್ಮ ಗಾಂಧಿಜಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ ಸ್ವಚ್ಛ ಭಾರತ ಎಂದು ಹೇಳಿದ್ದರು.
ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆಯತ್ತ ವಿಶೇಷ ಗಮನ ಹರಿಸಿರುವ ಪ್ರಧಾನಿ ಮೋದಿ, ದೇಶದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಸಭೆ ಕರೆದಿದ್ದಾರೆ. ಈ ಸಂಬಂಧ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯರ್ಶಿ ಶಾಲಿನಿ ರಜನೀಶ್ ಅವರು ಇಂದು ದೆಹಲಿಗೆ ತೆರಳಿದ್ದಾರೆ.
ಇದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಪ್ರಧಾನಿ ಮೋದಿಯವರಿಗೆ ಘನತ್ಯಾಜ್ಯದಿಂದ ತಯಾರಿಸಿದ ವಸ್ತುಗಳ ರೂಪದಲ್ಲಿ ಅದ್ಭುತ ಉಡುಗೊರೆಯನ್ನು ಸಿದ್ಧಪಡಿಸಿದೆ. ತಿನಿಸುಗಳ ಪ್ಲಾಸ್ಟಿಕ್ ಕವರ್ಗಳಿಂದ ಎಂಎಲ್ಪಿ ಕೋಸ್ಟರ್ ಮತ್ತು ಪಿನ್ ತಯಾರಿಸಲಾಗಿದೆ.
ಹಾಗೇ ಟೈಯರ್ನಿಂದ ಐಪ್ಯಾಡ್ ಬ್ಯಾಗ್, ವೆಸ್ಟೇಜ್ ಬಟ್ಟೆಗಳಿಂದ ವ್ಯಾಲೆಟ್ ಸಿದ್ದಪಡಿಸಲಾಗಿದೆ. ಕಾಟನ್ ಬಟ್ಟೆಯಿಂದ ನೋಟ್ ಪ್ಯಾಡ್, ಟೆಕ್ಸ್ಟೈಲ್ಸ್ ವೇಸ್ಟೇಜ್ನಿಂದ ಲ್ಯಾಪ್ ಟಾಪ್ ಕವರ್ ಮತ್ತು ನ್ಯೂಸ್ ಪೇಪರ್ನಿಂದ ಗಿಫ್ಟ್ ಪ್ಯಾಕೇಜ್ ತಯಾರು ಮಾಡಲಾಗಿದೆ.
ಸಭೆಯಲ್ಲಿ ಭಾಗಿಯಾಗಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯರ್ಶಿ ಶಾಲಿನಿ ರಜನೀಶ್ ಅವರು ಪ್ರಧಾನಿ ಮೋದಿಯವರಿಗೆ ಘನ ತ್ಯಾಜ್ಯದಿಂದ ಕಸದಿಂದ ತಯಾರಿಸಲಾಗಿರುವ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.