ಹೊಸದಿಗಂತ ವರದಿ, ರಾಯಚೂರು :
ಜಿಲ್ಲೆಯ ಸಿರವಾರ ತಾಲೂಕಿನ ಅತ್ನೂರ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಣೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೋರ್ವರು ಮೃತಪಟ್ಟಿದ್ದಾರೆ.
ಮೃತ ಸಿಬ್ಬಂದಿ ಜಾಗೀರ ಜಾಡಲದಿನ್ನಿ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಬಸವರಾಜ (೫೬) ಆಗಿದ್ದಾರೆ. ಇವರನ್ನು ಮತಗಟ್ಟೆಯ ಬಿ.ಎಲ್.ಒ ಆಗಿ ನಿಯೋಜನೆಗೊಂಡಿದ್ದರು.
ಬಸವರಾಜ ಅವರಿಗೆ ರಕ್ತದ ಒತ್ತಡ ಹಾಗು ಸಕ್ಕರೆ ಕಡಿಮೆ ಆದ ಪರಿಣಾಮ ೩.೩೦ ಸಮಯದಲ್ಲಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅವರ ಸಾವನ್ನಪ್ಪಿದ್ದಾರೆ.