ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಎಐಟಿಯ ವಿದ್ಯಾರ್ಥಿಯೊಬ್ಬ ಕಾಲೇಜಿನ ಹಾಸ್ಟೆಲ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಕಿಶೋರ್ ಶವ ಹಾಸ್ಟೆಲ್ನ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಠಡಿಯಿಂದ ಕೊಳೆತ ವಾಸನೆ ಬರುತ್ತಿದ್ದು, ರೂಮ್ನ ಬಾಗಿಲು ತೆಗೆದು ನೋಡಿದಾಗ ಕಿಶೋರ್ ಮೃತದೇಹ ಕಾಣಿಸಿದೆ.
ಕಿಶೋರ್ ತಂದೆ ಈಶ ಆಟೋ ಚಾಲಕರಾಗಿದ್ದು, ಬಡತನದ ಮಧ್ಯೆಯೂ ಮಗ ಎಂಜಿನಿಯರಿಂಗ್ ಮಾಡುವ ಕನಸು ಕಂಡಿದ್ದರು. ಕಿಶೋರ್ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ, ಸಿಕ್ಕಸಿಕ್ಕವರ ಬಳಿ ಹಣ ಕೇಳುತ್ತಿದ್ದ ಎಂದು ಆತನ ಸ್ನೇಹಿತರು ಮಾಹಿತಿ ನೀಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಅಷ್ಟೆಲ್ಲಾ ಹಣ ಯಾಕೆ ಬೇಕು? ಕಾಲೇಜಿನಲ್ಲಿ ಬೇರೆ ಚಟುವಟಿಕೆಗಳು ನಡೆಯುತ್ತಿದ್ದವಾ ಎಂದು ಪೋಷಕರು ಪ್ರಶ್ನಿಸಿದ್ದಾರೆ.
ಕ್ಯಾಂಪಸ್ ಒಳಗೆ ಡ್ರಗ್ಸ್ ಮಾಫಿಯಾ ಇರುವ ಅನುಮಾನಗಳು ಕಾಡಿದ್ದು, ಕಿಶೋರ್ ಡ್ರಗ್ಸ್ ದಂಧೆಗೆ ಬಲಿಯಾಗಿದ್ದಾನಾ ಎನ್ನುವ ಪ್ರಶ್ನೆ ಎದುರಾಗಿದೆ.