ಹೊಸದಿಗಂತ ಡಿಜಿಟಲ್ ಡೆಸ್ಕ್
ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಅಫಘಾತದಲ್ಲಿ ತೀವ್ರವಾಗಿ ಗಾಯಗೊಂಡ ಜಮ್ಮು ಮತ್ತು ಕಾಶ್ಮೀರದ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ಶೋಯೆಬ್ ಲೋನ್ನನ್ನು ಭಾರತ ಸರ್ಕಾರ ಏರ್ಲಿಫ್ಟ್ ಮಾಡಲು ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದು , ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕಾರ್ಯ ಮಾಡಿದ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ಅವರಿಗೆ ಶೋಯೆಬ್ ಲೋನ್ ತಂದೆ ಭಾವುಕರಾಗಿ ಧನ್ಯವಾದ ಹೇಳಿದ್ದಾರೆ.
ಢಾಕಾದಲ್ಲಿ ನಾವು ಆತಂಕಕ್ಕೆ ಒಳಗಾಗಿದ್ದೇವು. ಪುತ್ರನಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿತ್ತು. ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದಾರೆ. ನಮ್ಮಂತ ಜನಸಾಮಾನ್ಯರ ಮನವಿಸ್ಪಂದಿಸಿದ್ದಾರೆ. ಇದರಿಂದ ಪುತ್ರನನ್ನು ಢಾಕಾದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ ಎಂದು ಶೋಯೆಬ್ ಲೋನ್ ತಂದೆ ಭಾವುಕರಾಗಿ ನುಡಿದಿದ್ದಾರೆ. .
ಪುತ್ರನ ಚಿಕಿತ್ಸೆಗೆ, ಢಾಕಾದಿಂದ ಭಾರತಕ್ಕೆ ಕರೆತರಲು ಸಹಕರಿಸಿದ ಪ್ರಧಾನಿ ಮೋದಿಗೆ ಧನ್ಯವಾದ. ಇಂತಹ ಪ್ರಧಾನಿ ಇರುವಾಗ ಯಾರೂ ಆತಂಕ ಪಡಬೇಕಿಲ್ಲ. ನಿಮ್ಮಲ್ಲರ ಮನವಿಗೆ ಮೋದಿ ಸ್ಪಂದಿಸುತ್ತಾರೆ ಎಂದು ಶೋಯೆಬ್ ತಂದೆ ಮೊಹಮ್ಮದ್ ಅಸ್ಕಾನ್ ಲೋನ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶೋಯೆಬ್ ಲೋನ್ ಢಾಕಾದಲ್ಲಿ ಎಂಬಿಬಿಎಸ್ ಓದುತ್ತಿದ್ದ. ಭಾರತಕ್ಕೆ ವಾಪಸಾಗಲು ಢಾಕಾಗೆ ಆಗಮಿಸುತ್ತಿದ್ದ ವೇಳೆ ಅಪಘಾತವಾಗಿತ್ತು. ತೀವ್ರವಾಗಿ ಗಾಯಗೊಂಡ ಶೋಯೆಬ್ನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಮೊಹಮ್ಮದ್ ಅಸ್ಕಾನ್ ಲೋನ್ ಬಾಂಗ್ಲಾದೇಶಕ್ಕೆ ತೆರಳಲು ಮುಂದಾದರು. ಆದರೆ ವೀಸಾ ಸಮಸ್ಯೆಯಿಂದ ವಿಳಂಬವಾಗಿತ್ತು. ಬಾಂಗ್ಲಾದೇಶ ತಲುಪಿದ ಶೋಯೆಬ್ ತಂದೆಗೆ ದಿಕ್ಕೇ ತೋಚದಾಗಿದೆ. ಕಾರಣ ಅಲ್ಲಿನ ಭಾಷೆ, ಅಲ್ಲಿನ ರೂಪಾಯಿಂದ ಹೈರಾಣಾಗಿದ್ದರು
ಪುತ್ರನಿಗೆ ಪ್ರಥಮ ಚಿಕಿತ್ಸೆ ಹೊರತು ಪಡಿಸಿದರೆ ಇನ್ಯಾವುದೇ ಚಿಕಿತ್ಸೆಯನ್ನು ಆಸ್ಪತ್ರೆ ನೀಡಿರಲಿಲ್ಲ. ಇದರಿಂದ ಶೋಯೆಬ್ ತಂದೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದರು. ಇಷ್ಟೇ ಅಲ್ಲ 5 ದಿನದ ಚಿಕಿತ್ಸೆಗೆ 12 ಲಕ್ಷ ರೂಪಾಯಿ ಬಿಲ್ ಮಾಡಲಾಗಿತ್ತು. ಆತಂಕಗೊಂಡ ಶೋಯೆಬ್ ತಂದೆ ಇದೇ ವೇಳೆ ರಜೌರಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾಗೆ ಕರೆ ಮಾಡಿದ ಶೋಯೆಬ್ ತಂದೆ ಮಾಹಿತಿ ನೀಡಿದ್ದಾರೆ.
Aslam Lone, father of Shoaib (pic 2), says, "We were facing problems upon reaching there. Faced language barrier & expenses were high…We got in touch with BJP state president Ravinder Raina who promised us that he would ask PM Modi to bring back our child to India. I thank PM." pic.twitter.com/SRbtL3Vurv
— ANI (@ANI) June 13, 2022
ತಕ್ಷಣವೇ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ ರವೀಂದ್ರ ರೈನಾ , ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಮಾಹಿತಿ ನೀಡಿ,
ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಕೇಂದ್ರ ಸರ್ಕಾರ ಎಲ್ಲಾ ಪ್ರಕ್ರಿಯೆಯನ್ನು ಕ್ಷಣಾರ್ಧದಲ್ಲೇ ಮುಗಿಸಿತ್ತು. ಆಸ್ಪತ್ರೆ ಬಿಲ್ ಪಾವತಿಸಿ ಬಳಿಕ ಶೋಯೆಬ್ನನ್ನು ಏರ್ಲಿಫ್ಟ್ ಮೂಲಕ ದೆಹಲಿಗೆ ಕರೆ ತರಲಾಯಿತು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇದೀಗ ಶೋಯೆಬ್ಗಿ ಚಿಕಿಕ್ಸೆ ನೀಡಲಾಗುತ್ತಿದೆ. ಪುತ್ರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಶೋಯೆಬ್ ತಂದೆ ನಿರಾಳಾಗಿದ್ದಾರೆ.