ಹೊಸದಿಗಂತ ವರದಿ, ಮೈಸೂರು:
ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನ ಅಗ್ರಹಾರ ವೃತ್ತದ ಸಮೀಪ ಸೋಮವಾರ ನಡೆದಿದೆ.
ಮೈಸೂರಿನ ಅಗ್ರಹಾರದ ನಿವಾಸಿ ಸುಶೀಲಮ್ಮ (೫೭) ಮೃತಪಟ್ಟವರು. ಇವರು ಕೆ.ಆರ್.ಪೊಲೀಸ್ ಠಾಣೆ ಸಮೀಪ ರಸ್ತೆ ದಾಟುತ್ತಿದ್ದಾಗ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಅಸುನೀಗಿದರು. ಘಟನೆ ಸಂಬoಧ ಕೆ.ಆರ್. ಸಂಚಾರ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.