ವರುಣನ ಆರ್ಭಟಕ್ಕೆ ಚಿಕ್ಕಮಗಳೂರಿನ ನದಿಯಲ್ಲಿ ತೇಲಿ ಬಂತು ಮಹಿಳೆಯ ಶವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಬಿಕ್ಕರಣೆ ಸಮೀಪದ ಭದ್ರಾ ನದಿಯಲ್ಲಿ ಮಹಿಳೆಯೋರ್ವರ ಮೃತದೇಹ ನೀರಿನಲ್ಲಿ ಕೊಚ್ಚಿ ಬಂದ ಘಟನೆ ಶನಿವಾರ ನಡೆದಿದೆ.
ಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಬಿಕ್ಕರಣೆ ಸಮೀಪ ಮಹಿಳೆಯೋರ್ವರ ಮೃತ ದೇಹ ತೇಲಿ ಹೋಗುತ್ತಿರುವ ದೃಶ್ಯ ನೋಡಿ ಸ್ಥಳಿಯರು ಬೆಚ್ಚಿಬಿದ್ದಿದ್ದಾರೆ.
ತಾಲೂಕಿನ ಹೆಬ್ಬಾಳೆ ಸೇತುವೆ ಮೇಲೆ ಶನಿವಾರ ಹಸುವಿನ ಮೃತದೇಹ ಬಂದು ಬಿದ್ದಿತ್ತು, ಇದೀಗ ಮಹಿಳೆಯ ಮೃತ ದೇಹ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!