ಈಜಾಡಲು ತೆರಳಿ ನೀರಿನಲ್ಲಿ ಮುಳುಗಿ ಯುವಕ ಸಾವು

ಹೊಸದಿಗಂತ ವರದಿ,ಅಂಕೋಲಾ:

ಹಳ್ಳದ ನೀರಿನಲ್ಲಿ ಈಜಾಡಲು ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ತಾಲೂಕಿನ ಕೃಷ್ಣಾಪುರ ಬಳಿ ಸಂಭವಿಸಿದೆ.
ತಾಲೂಕಿನ ಬೆಳಂಬಾರದ ತಾಳೆಬೈಲ್ ನಿವಾಸಿ ರಾಹುಲ್ ಗಿರಿಧರ ಗೌಡ (23) ಮೃತ ವ್ಯಕ್ತಿಯಾಗಿದ್ದು ಮ್ಯಾಕಾನಿಕಲ್ ಇಂಜಿನಿಯರ್ ಪದವಿರನಾಗಿದ್ದ ಈತ ಮಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು
ಇತ್ತೀಚೆಗೆ ಊರಿಗೆ ಆಗಮಿಸಿದ್ದ ಎನ್ನಲಾಗಿದೆ.
ರವಿವಾರ ಮದ್ಯಾಹ್ನ ತನ್ನ ಮಾವನ ಮಗನ ಜೊತೆ ಕೃಷ್ಣಾಪುರದ ಐ.ಆರ್ .ಬಿ ಪ್ಲ್ಯಾಂಟೇಶನ್ ಹಿಂದುಗಡೆ ಇರುವ ಹಳ್ಳದ ನೀರಿನಲ್ಲಿ ಈಜಾಡಲು ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಪಿ.ಎಸ್. ಐ ಮಹಾಂತೇಶ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಿಪತ್ತು ನಿರ್ವಹಣಾ ಘಟಕದ ಸದಸ್ಯ ನಾಗರಾಜ ಐಗಳ್ ಮತ್ತು ವಿಶಾಖ ಐಗಳ್ ಶಾಸಕರು ನೀಡಿರುವ ಆಂಬ್ಯುಲೆನ್ಸ್ ನಲ್ಲಿ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ನೆರವಾದರು.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!