ಹೊಸದಿಗಂತ ವರದಿ, ಮೈಸೂರು:
ಮೈಮೇಲೆ ದೆವ್ವ ಬರುತ್ತಿದೆ, ಅದು ವಿಪರೀತ ಕಾಟ ಕೊಡುತ್ತಿದೆ ಎಂದು ಬೇಸತ್ತ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಘಟನೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾರ್ಬಳ್ಳಿ ಗ್ರಾಮದ ಋಷಭೇಂದ್ರ (೨೧) ಮೃತ ದುರ್ದೈವಿ. ಪಿಯುಸಿ ಓದಿದ್ದ ಈತನಿಗೆ ಕಳೆದ ನಾಲ್ಕು ವರ್ಷದಿಂದ ಮೈಮೇಲೆ ದೆವ್ವ ಆವರಿಸುತ್ತಿದೆ ಎಂದು ನಂಬಿ ಕಿರುಕುಳ ಅನುಭವಿಸುತ್ತಿದ್ದ.ಈ ಬಗ್ಗೆ ಹೆತ್ತವರು ಮನೋವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಕೊಡಿಸಿದ್ದರು.ಹೀಗಿದ್ದೂ ಮಾನಸಿಕವಾಗಿ ಋಷಭೇಂದ್ರ ಹೊರಬಂದಿರಲಿಲ್ಲ. ಮಾರ್ಬಳ್ಳಿಯಿಂದ ದೂರ ಗ್ರಾಮದಲ್ಲಿರುವ ಅಜ್ಜಿ ಮನೆಗೆ ತೆರಳುವುದಾಗಿ ತಿಳಿಸಿ ಹೊರಟವನು ಮನೆಗೆ ಹೊಂದಿರುಗಿಲ್ಲ.ಬುಧವಾರ ಬೆಳಿಗ್ಗೆ ಬೆಮಲ್ ಲೇಔಟ್ ನಲ್ಲಿರುವ ಗಣಪತಿ ದೇವಸ್ಥಾನ ಇರುವ ಪಾರ್ಕ್ ನ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ.
ಈತನ ಕೈಮೇಲೆ ಅಮ್ಮ ಎಂದು ಅಚ್ಚೆ ಬರೆಸಿಕೊಂಡಿದ್ದು ತನ್ನ ಜೇಬಿನಲ್ಲಿ ತಾಯಿಯ ಮೊಬೈಲ್ ನಂಬರ್ ಬರೆದ ಚೀಟಿ ಇಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕುವೆಂಪುನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ತಾಯಿ ನೀಡಿದ ಹೇಳಿಕೆಯನ್ನು ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.