ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ವಿಟ್ಲದ ಅಳಿಕೆ ಗ್ರಾಮದ ಕಲ್ಲದಂಬೆಯಲ್ಲಿನ ಕಲ್ಲಿನ ಕೋರೆಯಲ್ಲಿರುವ ನೀರಿನ ಚಿಲುಮೆಗೆ ಮಂಗಳವಾರ ಯುವಕನೊಬ್ಬ ಬಿದ್ದು ಮೃತಪಟ್ಟಿದ್ದಾನೆ.
ಉಕ್ಕುಡ ದರ್ಬೆ ನಿವಾಸಿ ಕಾರ್ತಿಕ್(೨೪) ಮೃತ. ಕಲ್ಲಿನ ಕೋರೆಯಲ್ಲಿ ಈಜಲು ಹೋಗಿದ್ದು, ಈ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಕೆಲವು ಮೂಲಗಳ ಪ್ರಕಾರ ಈಜಲು ಬಾರದ ವ್ಯಕ್ತಿ ನೀರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ. ಇನ್ನು ಕೆಲವು ಮೂಲದ ಪ್ರಕಾರ ಕೆಲಸಕ್ಕೆ ಬಂದ ವ್ಯಕ್ತಿ ಪಾನಮತ್ತನಾಗಿ ನೀರಿಗೆ ಬಿದ್ದಿದ್ದು, ಏಳಲಾಗದೆ ಮೃತಪಟ್ಟಿದ್ದಾನೆ ಎಂಬ ಮಾಹಿತಿಗಳು ಕೇಳಿ ಬರುತ್ತಿದೆ.
ಕುದ್ದುಪದವು ಪೆರುವಾಯಿ ರಸ್ತೆಯಲ್ಲಿ ಖಾಸಗೀ ಜಾಗಗಳಿಗೆ ಅಕ್ರಮವಾಗಿ ಪ್ರವೇಶ ಮಾಡಿಕೊಂಡು ಮಧ್ಯಪಾನ ಮಾಡುವ ಪ್ರಕ್ರಿಯೆಗಳು ನಡೆಯುತ್ತಲೇ ಇದ್ದರೂ, ಕೇಳುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.