ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಿನೆಮಾ ಶೂಟಿಂಗ್ ವೇಳೆ ತೆಲುಗು ಚಿತ್ರನಟ ರವಿತೇಜ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆ ನಡೆಸಿ 16 ಹೊಲಿಗೆ ಹಾಕಲಾಗಿದೆ.
ಟೈಗರ್ ನಾಗೇಶ್ವರ ರಾವ್ ಅವರ ಜೀವನ ಕಥೆಯನ್ನು ಆಧರಿಸಿರುವ ಈ ಚಿತ್ರದಲ್ಲಿ ನಟಿಸುತ್ತಿರುವ ಮಾಸ್ ಮಹಾರಾಜ ರವಿತೇಜ ಅವರ ಮುಂದಿನ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರುತ್ತಿದ್ದು ಅಕ್ಟೋಬರ್ 20 ರಂದು ಬಿಡುಗಡೆಗೆ ಸಿದ್ಧವಾಗುತ್ತಿದೆ.
ಈ ಸಿನೆಮಾದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ರವಿತೇಜ ಅವರಿಗೆ ಅಪಘಾತವಾಗಿದೆ.
ಟೈಗರ್ ನಾಗೇಶ್ವರ ರಾವ್ ಅವರ ಹೊಸ ಸಿನೆಮಾದಲ್ಲಿ ರೈಲು ದರೋಡೆ ದೃಶ್ಯವಿದೆ. ಈ ದೃಶ್ಯದ ಚಿತ್ರೀಕರಣದ ವೇಳೆ ನಟ ರೈಲಿನ ಮೇಲಿನಿಂದ ಜಿಗಿಯುವ ಒಂದು ದೃಶ್ಯವಿದ್ದು ಇದನ್ನು ಚಿತ್ರೀಕರಣ ನಡೆಸುತ್ತಿದ್ದ ವೇಳೆ ರವಿತೇಜ ಅವರು ಬಹುತೇಕ ಬ್ಯಾಲೆನ್ಸ್ ಕಳೆದುಕೊಂಡು ಕೆಳಗೆ ಬಿದ್ದ ಪರಿಣಾಮ ಅವರ ಮೊಣಕಾಲಿಗೆ ಗಾಯವಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ರವಿತೇಜಾಗೆ 16 ಹೊಲಿಗೆ ಹಾಕಿದ್ದಾರೆ ಎನ್ನಲಾಗಿದೆ.