ಚಿತ್ರೀಕರಣದಲ್ಲಿ ಅಪಘಾತ: ಪಕ್ಕೆಲುಬು ಮುರಿದು ಆಸ್ಪತ್ರೆಗೆ ದಾಖಲಾದ ನಟ ವಿಕ್ರಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳಿನ ಸ್ಟಾರ್ ಹೀರೋ ಚಿಯಾನ್‌ ವಿಕ್ರಮ್ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಪೊನ್ನಿಯಿನ್ ನಂತರ ವಿಕ್ರಮ್ ತಂಗಳನ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಂಜಿತ್ ನಿರ್ದೇಶನದ ಈ ಚಿತ್ರವು ಕೆಲವು ವರ್ಷಗಳ ಹಿಂದೆ ಇದ್ದ ಕೋಲಾರ ಚಿನ್ನದ ಗಣಿ ಕಾರ್ಮಿಕರ ಜೀವನ ಕಥೆಯನ್ನು ಆಧರಿಸಿದೆ. ವಿಕ್ರಮ್ ನಾಯಕನಾಗಿ, ಪಾರ್ವತಿ ಮತ್ತು ಮಾಳವಿಕಾ ಮೋಹನನ್ ನಾಯಕಿಯಾಗಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ವಿಕ್ರಮ್ ಲುಕ್ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದರು.

ಚಿಯಾನ್ ವಿಕ್ರಮ್ ತಂಗಳನ್ ಚಿತ್ರದ ಸೆಟ್‌ನಲ್ಲಿ ಅಪಘಾತಕ್ಕೀಡಾಗಿದ್ದರು. ಚಿತ್ರೀಕರಣ ಈಗಾಗಲೇ ಅಂತಿಮ ಹಂತ ತಲುಪಿದ್ದು, ಇಷ್ಟು ದಿನ ಪೊನ್ನಿಯಿನ್ ಸೆಲ್ವನ್ ಪ್ರಮೋಷನ್ ನಲ್ಲಿದ್ದ ವಿಕ್ರಮ್ ನಿನ್ನೆ ತಂಗಳನ್ ಚಿತ್ರದ ಶೂಟಿಂಗ್ ಗೆ ಸೇರಿಕೊಂಡಿದ್ದಾರೆ. ಚೆನ್ನೈನ ಇಪಿವಿ ಫಿಲ್ಮ್ ಸಿಟಿಯಲ್ಲಿ ತಂಗಳನ್ ಚಿತ್ರೀಕರಣ ನಡೆಯಲಿದೆ. ಇಂದು ಬೆಳಿಗ್ಗೆ ಕೆಲವು ಸಾಹಸ ದೃಶ್ಯಗಳು ತೆಗೆದುಕೊಳ್ಳುವಾಗ ಅಪಘಾತವಾಗಿ ವಿಕ್ರಮ್ ಪಕ್ಕೆಲುಬು ಮುರಿದಿತ್ತು. ತಕ್ಷಣ ಚಿತ್ರತಂಡ ವಿಕ್ರಂ ಆಸ್ಪತ್ರೆಗೆ ಧಾವಿಸಿದೆ. ಆಪರೇಷನ್ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ ಎಂದು ಚಿತ್ರ ಘಟಕದ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿಕ್ರಮ್ ಅಪಘಾತದಿಂದಾಗಿ ಈಗ ಚಿತ್ರೀಕರಣ ಸ್ಥಗಿತಗೊಂಡಿದೆ. ವಿಕ್ರಮ್ ಚೇತರಿಸಿಕೊಂಡ ನಂತರವೇ ಮತ್ತೆ ಶೂಟಿಂಗ್ ಶುರುವಾಗಲಿದೆ. ಈ ಹಿಂದೆಯೂ ಇದೇ ಚಿತ್ರದ ಸೆಟ್‌ನಲ್ಲಿ ವಿಕ್ರಮ್ ಅಪಘಾತಕ್ಕೀಡಾಗಿ ಕೆಲ ದಿನಗಳ ಕಾಲ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದರಿಂದ ವಿಕ್ರಮ್ ಅಭಿಮಾನಿಗಳು ಕಂಗಾಲಾಗಿದ್ದಾರೆ. ವಿಕ್ರಮ್ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ. ಸದ್ಯ ವಿಕ್ರಂಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!