ಮಕ್ಕಳ‌‌‌ ಕಳ್ಳರು ಎಂದು ವದಂತಿ ಹರಡುವವರ ವಿರುದ್ಧ ಕ್ರಮ: ಎಸ್ಪಿ ಎಚ್.ಡಿ.ಆನಂದಕುಮಾರ

ಹೊಸದಿಗಂತ ವರದಿ ವಿಜಯಪುರ:

ಮಕ್ಕಳ‌‌‌ ಕಳ್ಳರು ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್.ಡಿ. ಆನಂದಕುಮಾರ ಹೇಳಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳನ್ನು ಕಂಡು ಮಕ್ಕಳ ಕಳ್ಳರು ಎಂದು ಅಮಾಯಕರ ಮೇಲೆ ಹಲ್ಲೆಯಾಗುತ್ತಿರುವ ಘಟನೆ ನಡೆಯುತ್ತಿವೆ. ಹೀಗೆ ವದಂತಿಗಳಿಂದ ಅಮಾಯಕರ ಮೇಲೆ ಹಲ್ಲೆಗೆ ಸಾರ್ವಜನಿಕರು ಮುಂದಾಗಬಾರದು. ಇನ್ನೂ

ಆಡಿಯೋ, ವಿಡಿಯೋ ಹರಿಬಿಟ್ಟು ಕಿಡಿಗೇಡಿಗಳು ಆತಂಕ ಸೃಷ್ಟಿಮಾಡುತ್ತಿರುವುದು ಸರಿಯಲ್ಲ. ಅಲ್ಲದೆ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ 112 ಗೆ ಕರೆ ಮಾಡುವಂತೆ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!