ನಟ ದರ್ಶನ್ ಗೆ ಎದುರಾಗಿದೆ ‘ಮಹಾ ಸಂಕಷ್ಟ’, A-1 ಆರೋಪಿಯಾಗಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲು ಸಿದ್ಧತೆ ನಡೆದಿದೆ. ಈ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದು, ಆರೋಪಿ ಎ1 ಎಂದು ಆರೋಪಪಟ್ಟಿ ಸಲ್ಲಿಸಲು ಸಿದ್ಧತೆ ನಡೆದಿದೆ.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರ ಗೌಡ ಮೊದಲ ಆರೋಪಿಯಾಗಿದ್ದು, ದರ್ಶನ್ ಎ2 ಆರೋಪಿ.

ದರ್ಶನ್ ವಿರುದ್ಧ ಇನ್ನೂ ಬಲವಾದ ಸಾಕ್ಷ್ಯಗಳು ಬೆಳಕಿಗೆ ಬಂದಿವೆ. ಆರೋಪಿಯ ಮೊಬೈಲ್‌ನಲ್ಲಿ ನಾಲ್ಕು ಫೋಟೋಗಳು ಪತ್ತೆಯಾಗಿವೆ. ರಕ್ತಸಿಕ್ತ ರೇಣುಕಾ ಸ್ವಾಮಿಯ ನಾಲ್ಕು ಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ರೇಣುಕಾ ಸ್ವಾಮಿ ರಕ್ತದ ಮಡುವಿನಲ್ಲಿ ಸಾವನ್ನಪ್ಪಿರುವ ಫೋಟೋ ಕೂಡ ಬಿಡುಗಡೆಯಾಗಿದೆ. ಹೈದರಾಬಾದ್‌ನ ಎಫ್‌ಎಸ್‌ಎಲ್‌ನಿಂದ ಪ್ರದೋಶ್‌ನ ಮೊಬೈಲ್‌ ಮತ್ತು ಇನ್ನೊಬ್ಬ ಆರೋಪಿಯ ಮೊಬೈಲ್‌ ಫೋನ್‌ನ ಫೋಟೋಗಳನ್ನು ವಶಪಡಿಸಿಕೊಳ್ಳಲಾಗಿದೆ.

ರೇಣುಕಾಸ್ವಾಮಿ ಹತ್ಯೆಗೆ ಈ ಫೋಟೋಗಳೇ ಪ್ರಮುಖ ಸಾಕ್ಷಿ. ದರ್ಶನ್ ಅಣತಿಯಂತೆ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಹೊಡೆದು ಸಾಯಿಸಿದ್ದರು. ಕೊಲೆಯಾದ ನಂತರ ದರ್ಶನ್ ಶವ ವಿಲೇವಾರಿ ಮಾಡಲು ಹಣ ನೀಡಿದ್ದರು. ಹಾಗಾಗಿ ನಟ ದರ್ಶನ್ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲು ಸಿದ್ಧತೆ ನಡೆಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!