ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ನಿಲ್ದಾಣ ಸಿನಿಮಾ ನಾಯಕ ಪ್ರವೀಣ್ ತೇಜ್ ಕಾರಿನ ಮೇಲೆ ಹಲ್ಲೆ ನಡೆದಿದ್ದು, ದುಬಾರಿ ಕಾರ್ನ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ.
ಕಾರಿನ ಗಾಜು ಹೊಡೆದಿರುವುದು ಅಷ್ಟೇ ಅಲ್ಲದೆ, ಕುಟುಂಬದವರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪ್ರವೀಣ್ ದೂರು ನೀಡಿದ್ದಾರೆ.
ಬನ್ನೇರುಘಟ್ಟ ರಸ್ತೆಯಲ್ಲಿ ತಮ್ಮ ಸ್ನೇಹಿತರ ಮನೆಯಲ್ಲಿ ಪ್ರವೀಣ್ ಬರ್ಥ್ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ದಿಲೀಪ್ ಎಂಬಾತನಿಂದ ಗಲಾಟೆ ಆರಂಭವಾಗಿದ್ದು, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ ಎಂದು ಕಂಪ್ಲೆಂಟ್ನಲ್ಲಿ ಬರೆಯಲಾಗಿದೆ.
ಅದೇ ಅಪಾರ್ಟ್ಮೆಂಟ್ನಲ್ಲಿ ಪ್ರವೀಣ್ ಉಳಿದಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಕಾರಿನ ಗ್ಲಾಸ್ ಒಡೆದಿತ್ತು. ಸಿಸಿ ಟಿವಿ ಪರಿಶೀಲನೆ ವೇಳೆ ದಿಲೀಪ್ ಅವರೇ ಗಾಜು ಒಡೆದಿರುವುದು ತಿಳಿದುಬಂದಿದೆ.