ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಗ್ನಿವೀರ್ ಅಮೃತಪಾಲ್ ಸಿಂಗ್ ಅವರ ಅಂತ್ಯಕ್ರಿಯೆಗೆ ಸೇನಾ ಗೌರವವನ್ನು ನಿರಾಕರಿಸಿರುವ ಬಗ್ಗೆ ನಿಯಮಗಳನ್ನು ಉಲ್ಲೇಖಿಸಿ ಸೇನೆ ವಿವರವಾದ ಸ್ಪಷ್ಟನೆ ನೀಡಿದೆ.
ಅಮೃತಪಾಲ್ ಸಿಂಗ್ ಕರ್ತವ್ಯದಲ್ಲಿರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ವಯಂ ಪ್ರೇರಿತ ಗಾಯಗಳಿಂದ ಉಂಟಾಗುವ ಸಾವುಗಳಿಗೆ ನಿಯಮಗಳ ಪ್ರಕಾರ ಸೇನಾ ಗೌರವಗಳನ್ನು ನೀಡಲಾಗುವುದಿಲ್ಲ. ಹೀಗಾಗಿ ಅವರ ಅಂತ್ಯಕ್ರಿಯೆಗೆ ಮಿಲಿಟರಿ ಗೌರವವನ್ನು ನೀಡಲಾಗಿಲ್ಲ ಎಂದು ಸೇನೆ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸೇನೆಯು, ಅಮೃತಪಾಲ್ ಸಿಂಗ್ ಅವರ ಸಾವಿಗೆ ಸಂಬಂಧಿಸಿದಂತೆ ಕೆಲವು ತಿಳುವಳಿಕೆ ಮತ್ತು ಸತ್ಯಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದೆ.
ಅಗ್ನಿಪಥ್ ಯೋಜನೆಯ ಅನುಷ್ಠಾನದ ಮೊದಲು ಅಥವಾ ನಂತರ ಸೈನ್ಯಕ್ಕೆ ಸೇರಿದ್ದಾರೆಯೇ ಎಂಬುದರ ಆಧಾರದ ಮೇಲೆ ಸೈನಿಕರ ನಡುವೆ ವ್ಯತ್ಯಾಸವನ್ನು ಮಾಡುವುದಿಲ್ಲ ಎಂದು ಸೇನೆ ಪ್ರತಿಪಾದಿಸಿದೆ.
ಸೇನೆಯ ನಗ್ರೋಟಾ ಪ್ರಧಾನ ಕಚೇರಿಯ ವೈಟ್ ನೈಟ್ ಕಾರ್ಪ್ಸ್ ಶನಿವಾರ ರಜೌರಿ ಸೆಕ್ಟರ್ನಲ್ಲಿ ಸೆಂಟ್ರಿ ಡ್ಯೂಟಿಯಲ್ಲಿದ್ದಾಗ ಸ್ವಯಂ ಪ್ರೇರಿತ ಗುಂಡಿನ ಗಾಯದಿಂದಾಗಿ ಸಿಂಗ್ ಸಾವನ್ನಪ್ಪಿದ್ದಾರೆ. 1967ರ ಆರ್ಮಿ ಆರ್ಡರ್ ಪ್ರಕಾರ ಮಿಲಿಟರಿ ಶವ ಸಂಸ್ಕಾರಕ್ಕೆ ಅರ್ಹರಾಗಿರುವುದಿಲ್ಲ. ಈ ವಿಷಯದ ನೀತಿಯನ್ನು ಯಥಾ ಪ್ರಕಾರ ಅನುಸರಿಸಲಾಗಿದೆ ಎಂದು ಸೇನೆ ಹೇಳಿದೆ.
ದತ್ತಾಂಶದ ಪ್ರಕಾರ 2001 ರಿಂದ ಸರಾಸರಿ ವಾರ್ಷಿಕ 100-140 ಸೈನಿಕರು ಆತ್ಮಹತ್ಯೆಗಳು/ಸ್ವಯಂ-ಘೋಷಿತ ಗಾಯಗಳಿಂದ ಸಾವುಗಳು ಸಂಭವಿಸಿವೆ. ಅಂತಹ ಸಂದರ್ಭಗಳಲ್ಲಿ ಮಿಲಿಟರಿ ಅಂತ್ಯಕ್ರಿಯೆಯನ್ನು ಮಾಡಿಲ್ಲ. ಆದರೆ ಅಂತ್ಯಕ್ರಿಯೆಗಳನ್ನು ನಡೆಸಲು ಆರ್ಥಿಕ ಪರಿಹಾರದ ನೆರವನ್ನು ನೀಡಲಾಗುತ್ತದೆ ಎಂದು ಸೇನೆಯು ವಿವರಿಸಿದೆ.
“Unfortunate Death of Agniveer Amritpal Singh on 11 Oct 2023. It is a grave loss to the family and the Indian Army that Agniveer Amritpal Singh committed suicide by shooting himself while on sentry duty. In consonance with the existing practice, the mortal remains, after conduct… pic.twitter.com/p5I5KYXALf
— ANI (@ANI) October 15, 2023