ಲೈವ್ ಕಾರ್ಯಕ್ರಮದಲ್ಲೇ ಕುಸಿದುಬಿದ್ದು ಕೃಷಿ ತಜ್ಞ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೂರದರ್ಶನದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕೃಷಿ ತಜ್ಞರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಕೇರಳ ಕೃಷಿ ವಿವಿ ಯೋಜನಾ ನಿರ್ದೇಶಕರಾದ ಡಾ. ಅನಿ ದಾಸ್ ದೂರದರ್ಶನ ಸ್ಟುಡಿಯೋದಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಕೃಷಿ ದರ್ಶನ ಕಾರ್ಯಕ್ರಮ ನಡೆಯುವ ವೇಳೆ ದಿಢೀರನೆ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಅನಿ ದಾಸ್ ಭಾಗವಹಿಸಿದ್ದರು.

ಲೈವ್ ಕಾರ್ಯಕ್ರಮದಲ್ಲಿಯೇ ಈ ರೀತಿ ಆಗಿದ್ದು, ವೀಕ್ಷರಿಗೆ ಹಾಗೂ ಟಿವಿ ಸಿಬ್ಬಂದಿಗೆ ಆಘಾತವುಂಟುಮಾಡಿದೆ. ಕುಟುಂಬದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರೇಕ್ಷಕರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!