ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಡಾನ್ನಲ್ಲಿ ಸೇನಾ ಪಡೆ ಹಾಗೂ ಅರಸೇನಾ ಪಡೆ ನಡುವಿನಕದನ ಹೆಚ್ಚುತ್ತಿದ್ದು ರಾಜಧಾನಿ ಖಾರ್ಟೂಮ್ ಮೇಲೆ ನಡೆಸಲಾದ ವೈಮಾನಿಕ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟಟ್ಟಿರುವುದಾಗಿ ವರದಿಯಾಗಿದೆ.
ದಕ್ಷಿಣ ಖಾರ್ಟೂಮ್ನ ಮಾರುಕಟ್ಟೆ ಪ್ರದೇಶದ ಮೇಲೆ ಬೆಳಗ್ಗೆ 7:15ರ ಸುಮಾರಿಗೆ ವೈಮಾನಿಕ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಸ್ಥಳೀಯ ತುರ್ತು ಕೊಠಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಏಪ್ರಿಲ್ 15ರಂದು ಸುಡಾನ್ನಲ್ಲಿ ಸೇನಾ ಪಡೆದ ಹಾಗೂ ಅರೆಸೇನಾ ಪಡೆ ನಡುವೆ ಆರಂಭವಾಗಿದ್ದು, ಇನ್ನು ನಿಂತಿಲ್ಲ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.