ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸೇನೆ ರಾತ್ರೋ ರಾತ್ರಿ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ದಾಳಿ ನಡೆಸಿತ್ತು, ಈ ಪ್ರತೀಕಾರದ ದಾಳಿಯಲ್ಲಿ ನಿಷೇಧಿತ ಮೂರು ಉಗ್ರ ಸಂಘಟನೆಗಳಾದ ಜೈಶ್ ಎ ಮೊಹಮ್ಮದ್, ಲಷ್ಕರ್ ಎ ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಪ್ರಧಾನ ಕಚೇರಿಗಳು ಕೂಡ ಧ್ವಂಸವಾಗಿವೆ.
ಇನ್ನು ಉಗ್ರರ ಶವಗಳಿಗೆ ಧ್ವಜ ಹೊದಿಸಿ ಟ್ರ್ಯಾಕ್ಟರ್ನಲ್ಲಿ ಸಾಗಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
ವೀಡಿಯೋದಲ್ಲಿ, ಭಯೋತ್ಪಾದಕರ ಶವಗಳಿಗೆ ಪಾಕ್ ಧ್ವಜ ಹೊದಿಸಿ ಗೌರವ ಸೂಚಿಸಲಾಗಿದೆ. ಉಗ್ರರ ಶವಗಳ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನೆಯ ಅಧಿಕಾರಿಗಳು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.
ಹೀಗೂ ಉಂಟೇ? ಭಾರತೀಯರು ಸ್ವಾಭಿಮಾನಿಗಳು ಸ್ವಾವಲಂಬಿಗಳು ಸಾಕಾರ ಮೂರ್ತಿಗಳು ಸಂಘಟನಾ ಚತುರರು ಚೈತನ್ಯ ಶೀಲರು ಸರ್ವಗುಣ ಸಂಪನ್ನರು ಸಾಹಸಿಗಳು ಸಮರಶೂರರು ಇಂತಹ ನಮ್ಮ ನಮ್ಮೆಲ್ಲರ ದೇಶವಾಸಿಗಳ ಮೇಲೆ ಮಾಡಿದ ಹೇಯ ರಾಕ್ಷಸೀ ಕೃತ್ಯ ಜಗತ್ತಿನ ಯಾವ ದೇಶವಾಸಿಗಳೂ ಒಪ್ಪುವುದಿಲ್ಲ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ