ತಾಯಿಯ ಶ್ರಮಕ್ಕೆ ಫಲ:ಸಾವನ್ನಪ್ಪಿದ್ದಾಳೆ ಎಂದುಕೊಂಡಿದ್ದ ಮಗಳು ಮರಳಿ ಗೂಡಿಗೆ ಸೇರಿದ ಅಪರೂಪದ ಘಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದಲ್ಲಿ ಅಪರೂಪದ ಘಟನೆ ನಡೆದಿದೆ. ಏಳು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾಳೆ ಎಂದುಕೊಂಡಿದ್ದ ಬಾಲಕಿ ಮರಳಿ ಬಂದಿದ್ದಾಳೆ. ತಾಯಿಯ ಪ್ರಯತ್ನ ಫಲ ನೀಡಿದೆ. ಅಲಿಗಢದ 15 ವರ್ಷದ ಬಾಲಕಿ 2015ರಲ್ಲಿ ನಾಪತ್ತೆಯಾಗಿದ್ದಳು. ಆಗ ಬಾಲಕಿಯ ಪೋಷಕರು ವಿಷ್ಣು ಎಂಬ ಯುವಕನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಬಾಲಕಿಯನ್ನು ಬಲವಂತವಾಗಿ ಮದುವೆಯಾಗುವ ಉದ್ದೇಶದಿಂದ ವಿಷ್ಣು ತನ್ನ ಮಗಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಬಾಲಕಿ ತಾಯಿ ಆರೋಪಿಸಿದ್ದಾರೆ. ಸ್ಥಳೀಯ ಗೊಂಡಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಪ್ರತಿಕ್ರಿಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ವಿಷ್ಣುವನ್ನು ಬಂಧಿಸಿದ್ದರು. ಆಗ್ರಾ ಪ್ರದೇಶದಲ್ಲಿ ತನ್ನ ಮಗಳಂತೆ ಕಾಣುವ ಹುಡುಗಿಯೊಬ್ಬಳನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲಿಗೆ ಹೋದ ಪೋಷಕರು ಬಾಲಕಿಯ ಶವವನ್ನು ನೋಡಿ ಇದು ತಮ್ಮ ಮಗಳೆಂದು ಹೇಳಿದ್ದಾರೆ. ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಅಂತ್ಯಕ್ರಿಯೆಯ ವಿಧಿವಿಧಾನಗಳನ್ನೂ ನೆರವೇರಿಸಿದರು.

ಇತ್ತ ಈ ಕೊಲೆ ಮಾಡಿದ್ದಾನೆಂದಿ ವಿಷ್ಣುವನ್ನು ಪೊಲೀಸರು ಬಂಧಿಸಿದರು. ತನ್ನ ಮಗ ಕಿಡ್ನಾಪ್ ಮಾಡಿ ಕೊಲೆ ಮಾಡಿಲ್ಲ ಎಂದು ಆರೋಪಿ ವಿಷ್ಣು ತಾಯಿ ನಂಬಿದ್ದರು. ಹೇಗಾದರೂ ಮಾಡಿ ತನ್ನ ಮಗನನ್ನು ಉಳಿಸಲು ಸತತ ಪ್ರಯತ್ನದಿಂದಾಗಿ ಕಾಣೆಯಾದ ಹುಡುಗಿಯನ್ನು ಹುಡುಕಿದ್ದಾಳೆ. ಏಳು ವರ್ಷಗಳ ನಂತರ ಇತ್ತೀಚೆಗೆ ವಿಷ್ಣು ತಾಯಿಗೆ ಹುಡುಗಿ ಸಿಕ್ಕಳು. ಹುಡುಗಿಗೆ ಪ್ರಸ್ತುತ 22 ವರ್ಷ. ಹತ್ರಾಸ್ ಪಟ್ಟಣದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹುಡುಗಿಯನ್ನು ಗುರುತಿಸಿ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಾಲಕಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಏಳು ವರ್ಷಗಳ ಹಿಂದೆ ಸತ್ತೆ ಎಂದು ಭಾವಿಸಿದ್ದ ಬಾಲಕಿ ವಾಪಸ್ ಬಂದಿದ್ದಾಳೆ.

ಸದ್ಯ ಪೊಲೀಸರು ಬಾಲಕಿ ಹಾಗೂ ಆಕೆಯ ಪೋಷಕರಿಗೆ ಡಿಎನ್‌ಎ ಪರೀಕ್ಷೆ ನಡೆಸಲಿದ್ದಾರೆ. ಆರೋಪಿಗಳ ಬಿಡುಗಡೆ ಈ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಆರೋಪಿ ಖುಲಾಸೆಯಾದರೆ, ಮಗನ ನಿರಪರಾಧಿ ಎಂದು ಸಾಬೀತುಪಡಿಸಲು ತಾಯಿಯೊಬ್ಬರು ಏಳು ವರ್ಷಗಳ ಕಾಲ ಪಟ್ಟ ಶ್ರಮ ಫಲ ​​ನೀಡಿದಂತಿದೆ. ಇತ್ತ ಸತ್ತಿದ್ದಾಳೆ ಅಂದುಕೊಂಡಿದ್ದ ಮಗಳು ಮನೆಗೆ ವಾಪಸ್‌ ಬರುವಂತಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!