ಹೊಸದಿಗಂತ ಶಿವಮೊಗ್ಗ:
ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತ ಉಪಾಧ್ಯಕ್ಷರಾಗಿದ್ದ ಜ್ಯೇಷ್ಠ ಕಾರ್ಯಕರ್ತ ಡಿ.ಕೆ.ಸದಾಶಿವ್ (83) ವಿಧಿವಶರಾಗಿದ್ದಾರೆ.
ಬಿಬಿ ರಸ್ತೆ ನಿವಾಸಿ ಆಗಿದ್ದ ಅವರು, ಅವಿವಾಹಿತರಾಗಿದ್ದರು. ಸಹೋದರ ವಿಶ್ವನಾಥ ಅವರ ಮನೆಯಲ್ಲಿ ಜೊತೆಗಿದ್ದರು. ಇತ್ತೀಚಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗದ ತುಂಗಭದ್ರಾ ಸಕ್ಕರೆ ಕಾರ್ಖಾನೆಯಲ್ಲಿ ನೌಕರ.ಆಗಿ ಸೇರುವ ಮೂಲಕ ಕಾರ್ಮಿಕ ಜೀವನ ಆರಂಭಿಸಿದರು. ಅಲ್ಲಿ ಶೇಷಾದ್ರಿ ಜೊತೆಗೆ ಸೇರಿ ಬಿಎಂಎಸ್ ಸ್ತಾಪನೆ ಮಾಡಿದರು. ಜೊತೆಗೆ ಜಿಲ್ಲೆಯಲ್ಲಿ ಹತ್ತಾರು ಕಾರ್ಮಿಕ ಯೂನಿಯನ್ ಸ್ಥಾಪನೆ ಮಾಡಿದರು.
ಆನಂದಪಲ್ಲಿ ವೆಂಕಟರಾವ್ ಅನಾರೋಗ್ಯ ಹಿನ್ನೆಲೆಯಲ್ಲಿ ಬಿಎಂಎಸ್ ಪೂರ್ಣಾವಧಿ ಕೆಲಸಕ್ಕೆ ನಿಯೋಜಿತ ಆದರು. ಆಗ ಸಕ್ಕರೆ ಕಾರ್ಖಾನೆ ನೌಕರ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜ್ಯದಲ್ಲಿ ಸುತ್ತಾಡಿ ಬಿಎಂಎಸ್ ಪ್ರಬಲವಾಗಿ ಕಟ್ಟಿ, ಕೊನೆಯವರೆಗೂ ಕಾರ್ಮಿಕ ಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. .