ಉದ್ಧವ್‌ ಪತ್ನಿ ಒಪ್ಪಿದ್ರೆ ಮಾತ್ರ ರಾಜ್‌ ಠಾಕ್ರೆ ಜೊತೆಗೆ ಮೈತ್ರಿ: ಹೀಗ್ಯಾಕಂದ್ರು ಸಚಿವ ನಿತೇಶ್‌ ರಾಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಸೇನಾದಿಂದ ರಾಜ್‌ ಠಾಕ್ರೆ ಹೊರ ನಡೆಯಲು ಉದ್ಧವ್‌ ಠಾಕ್ರೆ ಪತ್ನಿ ರಶ್ಮಿ ಕಾರಣ. ಈಗ ಮತ್ತೆ ರಾಜ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದರೆ ರಶ್ಮಿ ಅನುಮತಿ ಪಡೆದುಕೊಳ್ಳಬೇಕು ಎಂದು ಮಹಾರಾಷ್ಟ್ರ ಸಚಿವ ನಿತೇಶ್‌ ರಾಣೆ ಹೇಳಿದ್ದಾರೆ.

ಯುಬಿಟಿ ಮತ್ತು ಎಂಎನ್‌ಎಸ್‌ ಮೈತ್ರಿ ವದಂತಿ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ.

ಎಂಎನ್ಎಸ್ ಜೊತೆ ಮೈತ್ರಿ ಮಾಡುವ ಕುರಿತು ಯಾವುದೇ ಕ್ರಮ ಕೈಗೊಳ್ಳುವ ಮೊದಲು ರಶ್ಮಿ ಠಾಕ್ರೆ ಅವರ ಅನುಮತಿ ಪಡೆದಿದ್ದೀರಾ ಎಂದು ಉದ್ಧವ್ ಠಾಕ್ರೆ ಅವರನ್ನು ಕೇಳಬೇಕು. ಅಂತಹ ನಿರ್ಧಾರಗಳಲ್ಲಿ ಪತ್ನಿಯ ಅಭಿಪ್ರಾಯವು ಹೆಚ್ಚು ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

ರಾಜ್‌ ಮತ್ತು ಉದ್ಧವ್‌ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ. ಆದರೂ ರಾಜ್‌ ಠಾಕ್ರೆ ಶಿವಸೇನಾದಿಂದ ಹೊರ ನಡೆದರು. ರಾಜ್‌ ನಿರ್ಗಮನದಲ್ಲಿ ರಶ್ಮಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ರಾಣೆ ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!