ಪಕ್ಷಕ್ಕೆ ಸದಾ ಋಣಿ, ಟಿಕೆಟ್ ದೊರೆಯುವ ವಿಶ್ವಾಸವಿದೆ: ಜಗದೀಶ್ ಶೆಟ್ಟರ್

ಹೊಸದಿಗಂತ ವರದಿ ಹುಬ್ಬಳ್ಳಿ:

ಬಿಜೆಪಿ ನನ್ನಗೆ ಎಲ್ಲ ಸ್ಥಾನ ಮಾನ ನೀಡಿದೆ. ಆದರಿಂದ ಪಕ್ಷಕ್ಕೆ ನಾನು ಋಣಿಯಾಗಿರುತ್ತೇನೆ. ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ ಈ ಬಾರಿಯೂ ನನಗೆ ಟಿಕಟ್ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಮಾಜಿಮುಖ್ಯಂತ್ರಿ ಜಗದೀಶ ಶೆಟ್ಟರ ಹೇಳಿದರು.

ಶನಿವಾರ ಕೇಂದ್ರದ ವರಿಷ್ಠರು ಟಿಕೆಟ್ ನೀಡುವ ವಿಳಂಬ ಮಾಡಿದ್ದರಿಂದ ಇಲ್ಲಿಯ ಬಾದಾಮಿ ನಗರದ ನಿವಾಸದಲ್ಲಿ ಕರೆಯಲಾಗಿದ್ದ ಸಭೆ ಉದ್ದೇಶಿಸಿ ಮಾತನಾಡಿದರು. ಸೆಂಟ್ರಲ್ ಕ್ಷೇತ್ರದಲ್ಲಿ ಆರು ಬಾರಿ ಗೆಲಲ್ಲು ಇಲ್ಲಿಯ ಜನರ ಆಶೀರ್ವಾದ, ಪ್ರೀತಿ ಮರೆಯಲು ಸಾಧ್ಯವಿಲ್ಲ. ನಿಮ್ಮಿಂದ ರಾಜ್ಯದ ನಾಯಕನಾಗುವ ಅವಕಾಶ ಸಿಕ್ಕಿದೆ. ವಿರೋಧ ಪಕ್ಷದ ನಾಯಕನಿದ್ದಾಗ ಈ ಭಾಗದಲ್ಲಿ ಬಿಜೆಪಿ‌ ಕಟ್ಟು ಬೆಳೆಸಿದ್ದೇನೆ ಎಂದರು.

ಟಿಕೆಟ್ ನೀಡಲು ಆಗ್ರಹ:
ಜಗದೀಶ ಶೆಟ್ಟರಗೆ ಟಿಕೆಟ್ ನೀಡಬೇಕು ಎಂದು ಸಭೆಯಲ್ಲಿ ಬೆಂಬಲಿಗರ ಆಗ್ರಹ ಮಾಡಿದರು.
ಬಿಜೆಪಿ‌ ಮುಖಂಡ ಶಂಕರಣ್ಣ ಮುನವಳ್ಳಿ, ಮಾಜಿ‌ ಮುಖ್ಯಮಂತ್ರಿ ಜಗದೀಶ ಶೆಟ್ಟರಗೆ ಇವತ್ತು ಇಂತಹ ಪರಿಸ್ಥಿತಿ ಬರಬಾರದಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಬೆಳಯಲು ಕಾರಣ ಜಗದೀಶ ಶೆಟ್ಟರ. ನಕರಾತ್ಮವಾಗಿ ಮಾತನಾಡುವುದು ಬೇಡ ಶೇ. 100 ಶೆಟ್ಟರ ಇಲ್ಲದ ಹಾಗೇ ಬಿಜೆಪಿ ರಾಜ್ಯದಲ್ಲಿ ಇರಲ್ಲ. ರಾಜಕಾರಣ ಹಾಳಾಗಿದ್ದು, ಇವರಿಂದ ಗೌರವದಿಂದ ಇದೆ. ವರಿಷ್ಠರು ಟಿಕೆಟ್ ನೀಡುತ್ತಾರೆ. ಸುತ್ತಮುತ್ತ ಜಿಲ್ಲೆಗಳಲ್ಲಿ ಪರಿಣಾಮ ಬಿರಲಿದೆ ಎಂದರು

ಬೆಂಬಲಿಗ ಅದ್ದಪ್ಪ ಜವಳಿ, ಯಾವುದೇ ಕಳಂಕವಿಲ್ಲದೆ, ಪಕ್ಷಾತೀತ, ಜಾತ್ಯಾತೀತವಾಗಿ ರಾಜಕಾರಣ ಮಾಡಿದ್ದಾರೆ. ಇಂತಹ ಮನುಷ್ಯನಿಗೆ ಟಿಕೆಟ್ ನೀಡುತ್ತಿದಿರುವುದು ಬೇಸರದ ಸಂಗತಿ. ಟಿಕೆಟ್ ನೀಡದರಿದ್ದರೆ ಚುನಾವಣೆ ಮೇಲೆ ಸಾಕಷ್ಟು ಪರಿಣಾಮ ಬಿರಲಿದೆ. ಇದೇ ರೀತಿ ಸಾಕಷ್ಟು ಬೆಂಬಲಿಗರು ತಮ್ಮ ಅಭಿಪ್ರಾಯ ವ್ತಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!