ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಆನೆ ಸಫಾರಿ ಎಂಜಾಯ್ ಮಾಡಿದ 45 ದೇಶಗಳ ರಾಯಭಾರಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಳೆಯಿಂದ ಗುವಾಹಟಿಯಲ್ಲಿ ನಡೆಯಲಿರುವ ಅಡ್ವಾಂಟೇಜ್ ಅಸ್ಸಾಂ ಶೃಂಗಸಭೆಗೆ ಮುನ್ನ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು 45 ದೇಶಗಳ ರಾಯಭಾರಿಗಳೊಂದಿಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಸಫಾರಿ ನಡೆಸಿದರು.

“ಹೆಚ್ಚು, ಪ್ರವಾಸಿಗರು ಬರುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಹೆಚ್ಚಿನ ಪ್ರವಾಸಿಗರು, ಅಂತರಾಷ್ಟ್ರೀಯ ಆಸಕ್ತಿಗಳು, ಹೆಚ್ಚಿನ ಹೂಡಿಕೆದಾರರನ್ನು ಪಡೆಯುತ್ತಿದೆ. ಆದ್ದರಿಂದ ಇದು ತುಂಬಾ ಒಳ್ಳೆಯ ಆರಂಭವಾಗಿದೆ.” ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಕಾಜಿರಂಗದಲ್ಲಿ ಅತಿ ಹೆಚ್ಚು ಪ್ರವಾಸಿಗರ ಒಳಹರಿವು ಇದೆ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಹೌದು ನನಗೆ ಗೊತ್ತು. ನಾವು ಈಗಾಗಲೇ ಮೂರು ಲಕ್ಷವನ್ನು ದಾಟಿದ್ದೇವೆ ಎಂದು ಅವರು ನನಗೆ ಹೇಳುತ್ತಿದ್ದರು. ಇದು ಒಳ್ಳೆಯ ಪ್ರವೃತ್ತಿಯಾಗಿದೆ. ಪ್ರಧಾನಿ ಕೂಡ ನಾವು ನೈಸರ್ಗಿಕ ಮತ್ತು ಸೃಜನಶೀಲ ಪ್ರವಾಸೋದ್ಯಮವನ್ನು ಹೊಂದಿರುವುದರಿಂದ ನಾವು ಪ್ರತಿ ರಾಜ್ಯಕ್ಕೂ ಭೇಟಿ ನೀಡಬೇಕು ಎಂದು ಹೇಳಿದ್ದಾರೆ” ಎಂದು ತಿಳಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!