ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಭೇಟಿ ನೀಡಿದ್ದಾರೆ.
ಬಾಲರಾಮ ದೇವರ ದರುಶನ ಪಡೆದ ಅವರು, ರಾಮ ಮಂದಿರದಲ್ಲಿ ಧ್ಯಾನ ಮಾಡಿ, ವಾಸ್ತುಶಿಲ್ಪವನ್ನು ಕಣ್ತುಂಬಿಕೊಂಡರು.
ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿದ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ ದೇವರ ದರುಶನ ಪಡೆಯಲು ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಇದೀಗ ಅಮಿತಾಭ್, ಸಿಐಎಸ್ಎಫ್ ಬಿಗಿ ಭದ್ರತೆಯಲ್ಲಿ ರಾಮಮಂದಿರಕ್ಕೆ ಆಗಮಿಸಿದ್ದಾರೆ.
ಕಳೆದ ತಿಂಗಳು ಜ.22ರಂದು ಅಮಿತಾಭ್ಗೆ ಅಯೋಧ್ಯೆಯ ಉದ್ಘಾಟನೆಗೆ ಆಹ್ವಾನ ನೀಡಿದ್ದರು. ಅದರಂತೆ ಪುತ್ರ ಅಭಿಷೇಕ್ ಬಚ್ಚನ್ ಜೊತೆ ಬಿಗ್ ಬಿ ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ದರು.