ಅಂಕೋಲಾ: ಆಕಸ್ಮಿಕವಾಗಿ ನೀರಿಗೆ ಬಿದ್ದು ಮೀನುಗಾರ ದುರ್ಮರಣ

ಹೊಸದಿಗಂತ ವರದಿ, ಅಂಕೋಲಾ:
ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತ ಪಟ್ಟ ಘಟನೆ ತಾಲೂಕಿನ ಕೇಣಿ ಮಾಂಗಟೇಶ್ವರ ಗುಡ್ಡದ ಬಳಿ ಸಂಭವಿಸಿದೆ.
ಗಾಬೀತ ಕೇಣಿ ನಿವಾಸಿ ಅಂಕುಶ ರಾಮದಾಸ ಅಂಕೋಲೆಕರ್ (35) ಮೃತ ವ್ಯಕ್ತಿಯಾಗಿದ್ದು ಈತ ಸೋಮವಾರ ಸಂಜೆ ಮಾಂಗಟೇಶ್ವರ ಗುಡ್ಡದ ಸಮೀಪ ಕೈ ಬಲೆ ಬೀಸುತ್ತಿದ್ದ ಸಂದರ್ಭದಲ್ಲಿ ಆಯ ತಪ್ಪಿ ಸಮುದ್ರದಲ್ಲಿ ಬಿದ್ದು ನೀರು ಪಾಲಾಗಿದ್ದ.
ಮಂಗಳವಾರ ಬೆಳಗ್ಗೆ ಮೃತದೇಹ ಅದೇ ಸ್ಥಳದಲ್ಲಿ ನೀರಿನಲ್ಲಿ ತೇಲುತ್ತಿರುವುದು ಮೀನುಗಾರರ ಗಮನಕ್ಕೆ ಬಂದಿದ್ದು ಬೆಲೇಕೇರಿ ಕರಾವಳಿ ಕಾವಲು ಪಡೆ ಮತ್ತು ಅಂಕೋಲಾ ಪೊಲೀಸ್ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಹಕಾರದಿಂದ ಶವವನ್ನು ನೀರಿನಿಂದ ಮೇಲೆತ್ತಿದ್ದರು.
ಅಂಕೋಲಾ ಪಿ.ಎಸ್. ಐ ಮಹಾಂತೇಶ ವಾಲ್ಮೀಕಿ, ಕರಾವಳಿ ಕಾವಲು ಪಡೆ ಸಿಬ್ಬಂದಿ ಮೋಹನದಾಸ ಶೇಣ್ವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ಜೊತೆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!