ಅಂಜನಾದ್ರಿ ಅಭಿವೃದ್ಧಿಗೆ 60 ಎಕರೆ ಅಗತ್ಯ: ಆನಂದ್ ಸಿಂಗ್

ಹೊಸದಿಗಂತ ವರದಿ, ಕೊಪ್ಪಳ:

ಅಂಜನಾದ್ರಿ ಅಭಿವೃದ್ಧಿಗೆ 60 ಎಕರೆ ಭೂಸ್ವಾಧೀನ ಅಗತ್ಯವಿದೆ. ರೂಪುರೇಷೆ ಸಿದ್ದವಾಗಿದ್ದು, 24 ರಂದು ಸಿಎಂ ಬಸವರಾಜ ಬೊಮ್ಮಾಯಿ ನಡೆಯುವ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ಮುನಿರಾಬಾದ್ ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಜನಾದ್ರಿ ಅಭಿವೃದ್ಧಿಗೆ ಸಂಬಂಧಿಸಿ 60 ಎಕರೆ ಭೂಮಿಯ ಅಗತ್ಯವಿದೆ. ಅಧಿಕಾರಿಗಳು ಬೆಟ್ಟದ ಪಕ್ಕದಲ್ಲೇ ಇರುವ ಭೂಮಿ ಗುರುತಿಸಿದ್ದರು. ಇಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತುವುದರಿಂದ ಬೆಟ್ಟದ ಸೌಂದರ್ಯ ಕಾಣುವುದಿಲ್ಲ. ಆದ್ದರಿಂದ ಅಂಜನಾದ್ರಿ ಪರ್ವತ ಮುಂಭಾಗದ ರಸ್ತೆ ಬದಿಯ ಭೂಮಿಯನ್ನು ಭೂಸ್ವಾಧೀನ ಕ್ಕೆ ಸಲಹೆ ನೀಡಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!