ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಬಿಡುಗಡೆಯಾದ ಅನ್ನಪೂರ್ಣಿ ಸಿನಿಮಾ ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿತ್ತು.
ಬ್ರಾಹ್ಮಣ ಪೂಜಾರಿಯ ಮಗಳು ಮಾಂಸ ತಿನ್ನುವುದು, ಶ್ರೀರಾಮ ಮಾಂಸಹಾರಿ ಎಂದಿದ್ದು, ಹಿಂದೂ ಹುಡುಗಿ ಮುಸ್ಲಿಂ ಹುಡುಗನ ಪ್ರೇಮಕಥೆ ಹೀಗೆ ಸಾಕಷ್ಟು ವಿಷಗಳಲ್ಲಿ ಸಿನಿಮಾ ಸಂಕಷ್ಟ ಎದುರಿಸಿತ್ತು.
ಇದೇ ಮೊದಲ ಬಾರಿಗೆ ನಟಿ ನಯನತಾರಾ ಈ ಬಗ್ಗೆ ಮಾತನಾಡಿದ್ದಾರೆ. ಅನ್ನಪೂರ್ಣಿ ಪಾತ್ರದಲ್ಲಿ ಇರುವ ಚಾಲೆಂಜಸ್ ನನಗೆ ಇಷ್ಟವಾಗಿತ್ತು. ಅದಕ್ಕಾಗಿ ಸಿನಿಮಾ ಒಪ್ಪಿದೆ. ದೇವರನ್ನು ಪೂಜಿಸುವವರು ಅಥವಾ ಪೂಜೆ ಮಾಡುವ ಮನೆತನದಲ್ಲಿ ಹುಟ್ಟಿದವರು ಈ ಸಿನಿಮಾ ನೋಡಿದಾಗ ಅವರಿಗೆ ನೋವಾಗಿದೆ ಎಂದು ನನಗೆ ಅರ್ಥವಾಗಿದೆ. ನಮ್ಮ ಸಿನಿಮಾ ಉದ್ದೇಶ ನಿಮಗೆ ನೋವು ಮಾಡುವುದಲ್ಲ. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವುದಾಗಿತ್ತು. ಪರಸ್ಪರ ಬೆಳೆಯೋಣ, ಪಾಸಿಟಿವಿಟಿ ಹೆಚ್ಚಿಸೋಣ ಜೈ ಶ್ರೀರಾಮ್ ಎಂದು ನಟಿ ಹೇಳಿದ್ದಾರೆ.