ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿರಂಜೀವಿ ಮತ್ತು ಚರಣ್ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿ ಕ್ರೇಜ್ ಹುಟ್ಟುಹಾಕಿದ್ದಾರೆ. ಆಚಾರ್ಯ ಸಿನಿಮಾ ಏಪ್ರಿಲ್ 29 ರಂದು ಬಿಡುಗಡೆಯಾಗಿದೆ. ಮೆಗಾ ಅಭಿಮಾನಿಗಳು ಮತ್ತು ಪ್ರೇಕ್ಷಕರು ತೆರೆಯ ಮೇಲೆ ತಂದೆ ಮತ್ತು ಮಗನನ್ನು ಒಟ್ಟಿಗೆ ನೋಡಿ ಖುಷಿ ಪಟ್ಟಿದ್ದಾರೆ. ಸಿನಿಮಾ ಬಿಡುಗಡೆ ಆದ್ರೆ ಹೀರೋಗಳಿಗೆ ಹಾಲಿನ ಅಭಿಷೇಕ, ಹಾರ ಕಟೌಟ್ಗಳು ಹೊಸದೇನಲ್ಲ ಆದ್ರೆ ನಿಜ ಜೀವನದಲ್ಲಿ ನಾಯಕ ಎನಿಸಿಕೊಂಡ ಸೋನು ಸೋದ್ಗೆ ಭರ್ಜರಿಯಾಗಿ ಹಾಲಿನ ಅಭಿಷೇಕ ನಡೆದಿದೆ.
ಆಚಾರ್ಯ ಸಿನಿಮಾದಲ್ಲಿ ಸೋನು ಸೂದ್ ವಿಲನ್ ಆಗಿ ನಟಿಸಿದ್ದಾರೆ. ರಿಲೀಸ್ ಆದ ಥಿಯೇಟರ್ಗಳಲ್ಲಿ ಸೋನುಸೂದ್ ಅಭಿಮಾನಿಗಳು ದೊಡ್ಡ ಕಟೌಟ್ ನಿಲ್ಲಿಸಿ, ಹೂವಿನ ಹಾರ, ಕುಂಕುಮ ಹಚ್ಚಿ ಹಾಲಿನ ಅಭಿಷೇಕ ಮಾಡಿದ್ದಾರೆ. ಇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗಿದೆ. ಕೊರೊನಾ ಸಮಯದಲ್ಲಿ ಅವರು ಮಾಡಿದ ಸಹಾಯ. ಕರೋನಾ ನಂತರವೂ ಅವರು ಸೋನು ಸೂದ್ ಫೌಂಡೇಶನ್ ಮೂಲಕ ಸೇವಾ ಕಾರ್ಯಕ್ರಮಗಳನ್ನು ಮುಂದುವರೆಸಿದರು. ಇದರಿಂದಾಗಿ ಜನರ ಮನಸಲ್ಲಿ ಕಣ್ಣಿಗೆ ಕಾಣುವ ದೇವರಾಗಿ ಉಳಿದಿದ್ದಾರೆ ಸೋನು ಸೂದ್.
The #SonuSood Phenomenon continues as the fans pour their love on the real hero once again! Such feat is rarely achieved by few super stars! @SonuSood pic.twitter.com/1hNurkpZR7
— Harish Kumar (@apparalaharishk) April 30, 2022