ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಒಂದರ ಮೇಲೊಂದು ಕಠಿಣ ಕ್ರಮಕ್ಕೆ ಮುಂದಾಗಿರುವ ಭಾರತ, ಇದೀಗ ಎಲ್ಲಾ ರೀತಿಯ ಮೇಲ್ ಮತ್ತು ಪಾರ್ಸೆಲ್ಗಳನ್ನು ಸ್ಥಗತಗೊಳಿಸಿ ಆದೇಶ ಹೊರಡಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ, ಅಂಚೆ ಇಲಾಖೆಯ ಎಲ್ಲಾ ಸೇವೆಗಳು ಪಾಕಿಸ್ತಾನದ ಜೊತೆಗೆ ಎಲ್ಲಾ ರೀತಿಯ ಮೇಲ್ ಮತ್ತ ಪಾರ್ಸೆಲ್ ವಿನಿಮಯವನ್ನು ವಾಯು ಅಥವಾ ಭೂ ಮಾರ್ಗವಾಗಿ ಸ್ಥಗಿತಗೊಳಿಸಿ ಆದೇಶಿಸಿದೆ ಎಂದು ತಿಳಿಸಿದೆ.
ಈಗಾಗಲೇ ಸಿಂಧೂ ನದಿ ಜಲ ಒಪ್ಪಂದ ಅಮಾನತು, ದ್ವಿಪಕ್ಷೀಯ ಒಪ್ಪಂದಕ್ಕೆ ತಡೆ, ಅಟ್ಟಾರಿ ಗಡಿ ಬಂದ್, ಪಾಕಿಸ್ತಾನ ಪ್ರಜೆಗಳಿಗೆ ದೇಶ ತೊರೆಯುವಂತೆ ಸೂಚಿಸಿದ್ದು, ಅದರ ಬೆನ್ನಲ್ಲೇ ಪಾಕಿಸ್ತಾನದಲ್ಲಿ ತಯಾರಾಗುವ ಯಾವುದೇ ಸರಕು ಉತ್ಪನ್ನಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾರತಕ್ಕೆ ಆಮದಾಗದಂತೆ ವ್ಯಾಪಾರ ವಹಿವಾಟಿನ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಭಾರತ ವಾಯು ಮಾರ್ಗ ಜಲ ಮಾರ್ಗವನ್ನೂ ಬಂದ್ ಮಾಡಿದ್ದು, ಇದೀಗ ಅಂಚೆ ಸೇವೆಗಳನ್ನು ಕೂಡ ಸ್ಥಗಿತ ಮಾಡಲು ಕೇಂದ್ರ ನಿರ್ಧರಿಸಿದೆ.